Advertisement

ಉದಕಮಂಡಲ: ಬಸ್ಸು ಪ್ರಪಾತಕ್ಕೆ ಬಿದ್ದು 6 ಸಾವು, 28 ಮಂದಿಗೆ ಗಾಯ

03:59 PM Jun 14, 2018 | Team Udayavani |

ಉದಕಮಂಡಲ : ತಮಿಳು ನಾಡಿನ ನೀಲಗಿರಿಯ ಜಿಲ್ಲೆಯ ದುರ್ಗಮ ಬೆಟ್ಟ ಪ್ರದೇಶದಲ್ಲಿ ಪ್ರಯಾಣಿಕರ ಬಸ್ಸು 500 ಅಡಿ ಆಳದ ಪ್ರಪಾತಕ್ಕೆ ಬಿದ್ದು ಸಂಭವಿಸಿದ ಭೀಕರ ಅವಘಡದಲ್ಲಿ 6 ಮಂದಿ ಮೃತಪಟ್ಟು ಇತರ 28 ಮಂದಿ ಗಾಯಗೊಂಡರು. 

Advertisement

ಇಲ್ಲಿಂದ ಸುಮಾರು 10 ಕಿ.ಮೀ. ದೂರದ ಮಂಡದ ಎಂಬದಲ್ಲಿ ಘಾಟ್‌ ರಸ್ತೆಯಲ್ಲಿನ ಗುಂಡಿಯೊಂದನ್ನು ತಪ್ಪಿಸುವ ಚಾಲಕನ ಯತ್ನದಲ್ಲಿ ರಾಜ್ಯ ಸಾರಿಗೆ ನಿಗಮದ ಬಸ್ಸು ನಿಯಂತ್ರಣ ತಪ್ಪಿ 500 ಅಡಿ ಆಳದ ಪ್ರಪಾತಕ್ಕೆ ಉರುಳಿ ಬಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. 

ಮೃತಪಟ್ಟ ಆರು ಮಂದಿಯಲ್ಲಿ ಇಬ್ಬರು ಮಹಿಳೆಯರು ಸೇರಿದ್ದಾರೆ. 28 ಮಂದಿ ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಚಿಂತಾಜನಕವಿದೆ ಎಂದು ಪೊಲೀಸರು ಹೇಳಿದ್ದಾರೆ. ಬಸ್ಸು ಇಲ್ಲಿಗೆ ಸಮೀಪದ ಕೂನೂರಿಗೆ ತೆರಳುತ್ತಿತ್ತು. ನೀಲಗಿರಿ ಜಿಲ್ಲೆಯ ಹಲವು ಭಾಗಗಳಲ್ಲಿ ಕಳೆದ ಕೆಲ ದಿನಗಳಿಂದ ಬಿರುಸಿನ ಮಳೆಯಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next