Advertisement

ಕಲ್ಯಾಣ್‌ನಲ್ಲಿ  ಸ್ವರಾಜ್‌ ಗ್ರೂಪ್‌ನ 5ನೇ ಶಾಖೆ ಆರಂಭ

11:59 AM Nov 21, 2017 | |

ಕಲ್ಯಾಣ್‌:  ಕಳೆದ 25 ವರ್ಷಗಳಿಂದ ಯಶಸ್ವಿಯಾಗಿ ಸೇವಾನಿರತವಾಗಿರುವ ಆರ್ಥಿಕ ಹಾಗೂ ವಾಸ್ತುಸೇವಾ ಸಂಸ್ಥೆ ಸ್ವರಾಜ್‌ ಗ್ರೂಪ್‌ ಆಫ್‌ ಕಂಪೆನೀಸ್‌ನ   5 ನೇ ನೂತನ ಶಾಖೆಯು ನ.19 ರಂದು  ಥಾಣೆ ಜಿÇÉೆಯ ಕಲ್ಯಾಣ್‌ (ಪಶ್ಚಿಮ) ರೈಲು ನಿಲ್ದಾಣ ಸಮೀಪದ ಗೋಪಾಲಕೃಷ್ಣ ಹೊಟೇಲ್‌ ಎದುರುಗಡೆ  ಇರುವ ಗಿರಿರಾಜ್‌ ಭವನದ ಒಂದನೇ ಮಹಡಿಯಲ್ಲಿ ಶುಭಾರಂಭಗೊಂಡಿತು.

Advertisement

ತದನಂತರ ಕಲ್ಯಾಣ್‌ ಪಶ್ಚಿಮ ಸಾಗರ್‌ ಇಂಟರ್‌ನ್ಯಾಶನಲ್‌  ಹೊಟೇಲ್‌ ಸಮೀಪ ದಲ್ಲಿರುವ ಮೌರ್ಯ ಗ್ರಾÂಂಡ್‌  ಸಭಾಗೃಹದಲ್ಲಿ ಜರಗಿದ ಉದ್ಘಾಟನಾ  ಕಾರ್ಯಕ್ರಮವನ್ನು ಶಿರ್ವ ನಡಿಬೆಟ್ಟು ನಿತ್ಯಾನಂದ ಹೆಗ್ಡೆ ದೀಪ ಬೆಳಗಿಸಿ ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಮಿತಿ ಸದಸ್ಯ ಕೆ. ಉದಯ ಕುಮಾರ್‌ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಬಂಟರ  ಸಂಘ ಮುಂಬಯಿ  ಇದರ ಉಪಾಧ್ಯಕ್ಷ  ಚಂದ್ರಹಾಸ ಶೆಟ್ಟಿ , ಪುಣೆ ಬಂಟರ ಸಂಘದ ಅಧ್ಯಕ್ಷ ಇನ್ನ ಕುರ್ಕಿಲ್‌ ಬೆಟ್ಟು ಸಂತೋಷ್‌ ಶೆಟ್ಟಿ, ವಿದ್ಯಾವರ್ಧಕ ಸಂಘ ಕಟಪಾಡಿ ಉಡುಪಿ ಇದರ ಕಾರ್ಯದರ್ಶಿ ಕೆ. ಮಹೇಶ್‌ ಶೆಣೈ, ವಾಸ್ತು  ವಿಜ್ಞಾನದಲ್ಲಿ ಚಿನ್ನದ  ಪದಕ ವಿಜೇತ ಡಾ| ದಿನೇಶ್‌ ಶೆಟ್ಟಿ, ಸ್ವರಾಜ್‌ ಗ್ರೂಪ್‌ ಆಫ್‌  ಕಂಪೆನೀಸ್‌ನ ಪುರಂದರ ಶೆಟ್ಟಿ ಉಪಸ್ಥಿತರಿದ್ದರು.

ಇತ್ತೀಚಿನ ದಿನಗಳಲ್ಲಿ ವಾಸ್ತು ಸಲಕರಣೆ ದುಬಾರಿಯಾಗುತ್ತಿದ್ದು ಈ ವಾಸ್ತು ಸಲಕರಣೆ ಜನಸಾಮಾನ್ಯರಿಗೂ ತಲುಪಬೇಕೆಂಬ ಉದ್ದೇಶದಿಂದ ಸ್ವರಾಜ್‌ ವಾಸ್ತು ಕಿಟ್‌ ಅನ್ನು ರಾಷ್ಟ್ರೀಯ ವಾಸ್ತುತಜ್ಞ ಪ್ರಸಾದ್‌ ಜೋಶಿ  ಬಿಡುಗಡೆಗೊಳಿಸಿದರು. ಈ ಸಂದರ್ಭ ಸಂಸ್ಥೆಯೊಂದಿಗೆ ಕಳೆದ 25 ವರ್ಷಗಳಿಂದ ನಿಕಟರಾಗಿರುವ ಗ್ರಾಹಕರಾದ  ಶಂಕರ ಶೆಟ್ಟಿ ಪುತ್ತೂರು, ರಾಧಾಕೃಷ್ಣ ಶೆಟ್ಟಿ ,ಸುಧೀರ್‌ ಕೊಡ್ಗಿ ಅವರನ್ನು ಸತ್ಕರಿಸಲಾಯಿತು. ಉಡುಪಿ ಅಂಬಾಗಿಲಿನ ಬಿ. ನಾರಾಯಣ ಶೆಟ್ಟಿ , ಡೊಂಬಿವಲಿ ಕರ್ನಾಟಕ ಸಂಘದ ಅಧ್ಯಕ್ಷ ದಿವಾಕರ ಶೆಟ್ಟಿ ಇಂದ್ರಾಳಿ, ಕಲ್ಯಾಣ್‌- ಡೊಂಬಿವಲಿ ನಗರಸೇವಕ ದಯಾಶಂಕರ್‌ ಶೆಟ್ಟಿ,ಮುಂಬಯಿ ಬಂಟರ ಸಂಘದ ಭಿವಂಡಿ – ಬದ್ಲಾಪುರ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಸುಬ್ಬಯ್ಯ ಎ ಶೆಟ್ಟಿ ,ಉಪ ಕಾರ್ಯಾಧ್ಯಕ್ಷ ಸತೀಶ್‌ ಎನ್‌. ಶೆಟ್ಟಿ,ಕ ೋಶಾಧಿಕಾರಿ ಸುಭೋದ್‌ ಡಿ. ಭಂಡಾರಿ, ಸಂಕ್ಲೇಶ್‌ ಜುವೆಲರ್ಸ್‌ನ ಪ್ರಕಾಶ್‌ ಸಂಕ್ಲೇಶ್‌ ಅವರನ್ನು ಅತಿಥಿಗಣ್ಯರು ಗೌರವಿಸಿದರು. ಕಾರ್ಯಕ್ರಮವನ್ನು  ಕರ್ನೂರು ಮೋಹನ್‌ ರೈ ನಿರೂಪಿಸಿದರು. 

ಚಿತ್ರ, ವರದಿ : ಕಿರಣ್‌ ಬಿ.ರೈ ಕರ್ನೂರು

Advertisement

Udayavani is now on Telegram. Click here to join our channel and stay updated with the latest news.

Next