Advertisement

Gujarat ನಿಂದ ಅಯೋಧ್ಯೆಗೆ ಬಂತು 500 ಕೆಜಿ ತೂಕದ ಚಿನ್ನ, ಬೆಳ್ಳಿ ಲೇಪಿತ ನಗಾರಿ…

10:39 AM Jan 12, 2024 | Team Udayavani |

ಗುಜರಾತ್: ಅಯೋಧ್ಯೆಯಲ್ಲಿ ಜನವರಿ 22ರಂದು ನಡೆಯಲಿರುವ ರಾಮಮಂದಿರ ಉದ್ಘಾಟನೆ ಕುರಿತು ದೇಶಾದ್ಯಂತ ರಾಮಭಕ್ತರಲ್ಲಿ ಸಂಭ್ರಮ ಮನೆ ಮಾಡಿದೆ. ಈ ನಡುವೆ ದೇಶದ ಮೂಲೆ ಮೂಲೆಯಿಂದ ಭಕ್ತರು ದೇವಸ್ಥಾನಕ್ಕೆ ವಿಶಿಷ್ಟ ರೀತಿಯಲ್ಲಿ ವಸ್ತುಗಳನ್ನು ಸೇವೆಯ ರೂಪದಲ್ಲಿ ನೀಡುತ್ತಿದ್ದಾರೆ ಅದೇ ರೀತಿ ಗುಜರಾತ್ ನಿಂದಲೂ ಓರ್ವ ಭಕ್ತರು ದೇವಸ್ಥಾನಕ್ಕೆ ಭಾರಿ ಗಾತ್ರದ ನಗಾರಿಯನ್ನು ಕಾಣಿಕೆಯಾಗಿ ನೀಡಿದ್ದಾರೆ.

Advertisement

ಇದರ ತೂಕವೇ ಬರೋಬ್ಬರಿ ಐನೂರು ಕೆಜಿ ಇದ್ದು ವಿಶೇಷ ಮೆರವಣಿಗೆ ಮೂಲಕ ಗುರುವಾರ ಅಯೋಧ್ಯೆಯನ್ನು ತಲುಪಿದೆ.

ಚಿನ್ನ ಮತ್ತು ಬೆಳ್ಳಿ ಲೇಪಿತ:
ಗುಜರಾತ್‌ನ ಅಹಮದಾಬಾದ್‌ನಿಂದ ಈ ನಗಾರಿಯನ್ನು ಮೆರವಣಿಗೆ ಮೂಲಕ ಅಯೋಧ್ಯೆಗೆ ತರಲಾಗಿದೆ. ಸುಮಾರು ಐನೂರು ಕೆಜಿ ತೂಕ ಇರುವ ನಗಾರಿಯನ್ನು ಚಿನ್ನ ಮತ್ತು ಬೆಳ್ಳಿಯಿಂದ ಲೇಪಿಸಲಾಗಿದೆ. ರಚನೆಯಲ್ಲಿ ಕಬ್ಬಿಣ ಮತ್ತು ತಾಮ್ರದ ಫಲಕಗಳನ್ನು ಸಹ ಬಳಸಲಾಗಿದೆ. ಈ ನಗಾರಿಯನ್ನು ದಬ್ಗರ್ ಸಮುದಾಯದ ಜನರೇ ತಯಾರಿಸಿದ್ದಾರೆ. ಇದರ ಸದ್ದು ಕೆಲ ಕಿಲೋಮೀಟರ್ ದೂರದವರೆಗೆ ಕೇಳಲಿದೆಯಂತೆ. ಹಿಂದೂ ಸಂಸ್ಕೃತಿಯ ಪ್ರತೀಕವಾದ ಈ ಬೃಹತ್ ನಗಾರಿಯನ್ನು ರಾಮಮಂದಿರದಲ್ಲಿ ಸ್ಥಾಪಿಸಲು ಕರ್ಣಾವತಿ ಮಹಾನಗರದ ದರ್ಯಾಪುರದಲ್ಲಿ ನಿರ್ಮಿಸಲಾಗಿದೆ. ಗುಜರಾತ್ ವಿಶ್ವ ಹಿಂದೂ ಪರಿಷತ್ತಿನ ಪ್ರದೇಶ ಸಚಿವ ಅಶೋಕ್ ರಾವಲ್ ಅವರು ನಗಾರಿಯನ್ನು ಸ್ವೀಕರಿಸಲು ಶಿಫಾರಸು ಮಾಡಿ ಪತ್ರವನ್ನು ಕಳುಹಿಸಿದ್ದಾರೆ. ಅದರಂತೆ ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಅವರು ನಗಾರಿಯನ್ನು ಸ್ವೀಕರಿಸಿ ರಾಮಮಂದಿರದ ಸೂಕ್ತವಾದ ಸ್ಥಳದಲ್ಲಿ ಇರಿಸಲಾಗುವುದು ಎಂದು ಹೇಳಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next