Advertisement

ಎನ್‌ಕೌಂಟರ್‌: ಐವರು ಉಗ್ರರು ಫಿನಿಶ್‌; 2 ವಾರಗಳ ಅವಧಿಯಲ್ಲಿ 25 ಮಂದಿಯ ಸದೆಬಡಿದ ಭದ್ರತಾ ಪಡೆ

08:07 AM Jun 11, 2020 | mahesh |

ಶ್ರೀನಗರ: ದಕ್ಷಿಣ ಕಾಶ್ಮೀರದ ಶೋಪಿಯಾನ್‌ ಜಿಲ್ಲೆಯಲ್ಲಿ ಬುಧವಾರ ಮತ್ತೂಂದು ಮಹತ್ವದ ಕಾರ್ಯಾಚರಣೆ ನಡೆಸಿರುವ ಭದ್ರತಾ ಪಡೆ, ಐವರು ಉಗ್ರರನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಕೇವಲ ಎರಡು ವಾರಗಳ ಅವಧಿಯಲ್ಲಿ ಕಣಿವೆ ರಾಜ್ಯದಲ್ಲಿ 25 ಉಗ್ರರನ್ನು ಮುಗಿಸಿದಂತಾಗಿದೆ.

Advertisement

ಶೋಪಿಯಾನ್‌ ಜಿಲ್ಲೆಯ ಸುಗೂ ಹೆಂಧಮಾ ಪ್ರದೇಶದಲ್ಲಿ ಉಗ್ರರು ಅವಿತಿರುವ ಸುಳಿವಿನ ಮೇರೆಗೆ ಬುಧವಾರ ಮುಂಜಾನೆ ಪೊಲೀಸರು, ಸಿಆರ್‌ಪಿಎಫ್ ಹಾಗೂ ಸೇನೆಯ ಜಂಟಿ ತಂಡವು ಶೋಧ ಕಾರ್ಯಾ ಚರಣೆ ಕೈಗೊಂಡಿತ್ತು. ಬೆಳಗಿನ ಜಾವ 5.30ರ ವೇಳೆಗೆ ಏಕಾಏಕಿ ಉಗ್ರರು ಗುಂಡಿನ ಮಳೆಗರೆಯ ತೊಡ ಗಿದರು. ಆಗ ಭದ್ರತಾ ಪಡೆ ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ಆರಂಭವಾಯಿತು.

ಆರಂಭದಲ್ಲಿ ಮೂವರು ಉಗ್ರರನ್ನು ಹತ್ಯೆಗೈದರೆ, ನಂತರ ಮತ್ತೂಬ್ಬನನ್ನು ಹೊಡೆದುರುಳಿಸಲಾಯಿತು ಎಂದು ಸೇನೆಯ ವಕ್ತಾರರು ತಿಳಿಸಿದ್ದಾರೆ. ಮುಂಜಾ ಗ್ರತಾ ಕ್ರಮವಾಗಿ ಜಿಲ್ಲಾದ್ಯಂತ ಇಂಟರ್ನೆಟ್‌ ಸೇವೆ ಯನ್ನು ಸ್ಥಗಿತಗೊಳಿ ಸಲಾಗಿತ್ತು ಎಂದೂ ಅವರು ಮಾಹಿತಿ ನೀಡಿದ್ದಾರೆ. ಪ್ರಸಕ್ತ ವಾರದಲ್ಲಿ ಶೋಪಿ ಯಾನ್‌ ಜಿಲ್ಲೆಯಲ್ಲಿ ನಡೆದ ಮೂರನೇ ಎನ್‌ ಕೌಂಟರ್‌ ಇದಾಗಿದ್ದು, ಭಾನುವಾರ ಮತ್ತು ಸೋಮ ವಾರ ನಡೆದ ಗುಂಡಿನ ಚಕಮಕಿಯಲ್ಲಿ ಹಿಜ್ಬುಲ್‌ ಮುಜಾಹಿದೀನ್‌ನ 9 ಉಗ್ರರನ್ನು ಹೊಡೆದುರುಳಿಸಲಾಗಿತ್ತು.

ಪಾಕ್‌ನಿಂದ ಶೆಲ್‌ ದಾಳಿ: ಇದೇ ವೇಳೆ, ರಜೌರಿ ಜಿಲ್ಲೆಯ ನೌಶೆರಾ ವಲಯದ ಗಡಿ ನಿಯಂತ್ರಣ ರೇಖೆ ಉದ್ದಕ್ಕೂ ಬುಧವಾರ ಪಾಕಿಸ್ತಾನದ ಸೇನೆ ಶೆಲ್‌ ದಾಳಿ ನಡೆಸಿದೆ. ಭಾರತೀಯ ಸೇನೆಯೂ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next