Advertisement

Canada: 41 ಕೆನಡಾ ರಾಜತಾಂತ್ರಿಕರು ವಾಪಸ್‌

11:45 PM Oct 20, 2023 | Team Udayavani |

ಟೊರೊಂಟೊ/ಹೊಸದಿಲ್ಲಿ: ಕೇಂದ್ರ ಸರಕಾರದ ತಾಕೀತಿನ ಅನ್ವಯ ಹೊಸದಿಲ್ಲಿಯಲ್ಲಿ ಇರುವ ಹೈಕಮಿಷನ್‌ ಕಚೇರಿಯಿಂದ 41 ಮಂದಿ ಹೆಚ್ಚುವರಿ ರಾಜತಾಂತ್ರಿಕ ಸಿಬಂದಿಯನ್ನು ಕೆನಡಾ ಅಧಿಕೃತವಾಗಿ ವಾಪಸ್‌ ಪಡೆದುಕೊಂಡಿದೆ.

Advertisement

ಉಗ್ರ ನಿಜ್ಜರ್‌ ಸಾವಿಗೆ ಭಾರತವೇ ಕಾರಣ ಎಂದು ದೂರಿ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರಾಡೊ ನಗೆಪಾಟಲಿಗೆ ಈಡಾಗಿದ್ದರು. ಈ ಆರೋಪದಿಂದ ಕ್ರುದ್ಧ ಗೊಂಡಿದ್ದ ಭಾರತವು ಹೊಸದಿಲ್ಲಿಯ ಕೆನಡಾ ಹೈಕಮಿಶನ್‌ ಕಚೇರಿಯಲ್ಲಿ ಇರುವ ಹೆಚ್ಚುವರಿ ಸಿಬಂದಿ ಕಡಿತಗೊಳಿಸಬೇಕು ಎಂದು ಎಚ್ಚರಿಕೆ ನೀಡಿತ್ತು. ಶುಕ್ರವಾರ ಹೆಚ್ಚುವರಿ ರಾಜತಾಂತ್ರಿಕ ಸಿಬಂದಿ ಕೆನಡಾಕ್ಕೆ ವಾಪಸಾಗಿದ್ದಾರೆ.

ವೀಸಾ ಸೇವೆ ಸ್ಥಗಿತ
ಇದರ ಜತೆಗೆ ಬೆಂಗಳೂರು, ಚಂಡೀಗಢ, ಮುಂಬಯಿಯಲ್ಲಿ ಇರುವ ದೂತಾವಾಸ ಕಚೇರಿ ಗಳನ್ನು ಮುಚ್ಚಲು ಕೆನಡಾ ಸರಕಾರ ತೀರ್ಮಾನಿಸಿದೆ. ಮುಂದಿನ ದಿನಗಳಲ್ಲಿ ಹೊಸದಿಲ್ಲಿಯಲ್ಲಿ ಮಾತ್ರ ವೀಸಾ ಮತ್ತು ದೂತಾವಾಸ ಸೇವೆ ನೀಡುವುದಾಗಿ ಹೇಳಿಕೊಂಡಿದೆ.

 

Advertisement

Udayavani is now on Telegram. Click here to join our channel and stay updated with the latest news.

Next