Advertisement

BBK11: ಮೂರನೇ ಸ್ಪರ್ಧಿಯಾಗಿ ಬಿಗ್‌ ಬಾಸ್‌ ಮನೆಗೆ ʼಫೈರ್‌ ಬ್ರ್ಯಾಂಡ್‌ʼ ಎಂಟ್ರಿ

09:51 PM Sep 28, 2024 | Team Udayavani |

ಬೆಂಗಳೂರು: ಕಿಚ್ಚ ಸುದೀಪ್‌ ನಡೆಸಿಕೊಡುವ ಬಿಗ್‌ ಬಾಸ್‌ ಕನ್ನಡ -11(Bigg Boss Kannada -11) ಕಾರ್ಯಕ್ರಮದ ಮೊದಲ ಎರಡು ಸ್ಪರ್ಧಿಗಳು ಯಾರು ಎನ್ನುವುದು ರಿವೀಲ್‌ ಆಗಿದೆ.

Advertisement

ಮೊದಲ ಸ್ಪರ್ಧಿಯಾಗಿ ʼಸತ್ಯʼ ಧಾರಾವಾಹಿ ಖ್ಯಾತಿಯ ಗೌತಮಿ ಜಾಧವ್‌ (Gautami Jadhav) ಎರಡನೇ ಸ್ಪರ್ಧಿಯಾಗಿ ವಾದ – ವಿವಾದದಿಂದಲೇ ಸುದ್ದಿಯಾಗುವ ಲಾಯರ್‌ ಜಗದೀಶ್‌ (Lawyer Jagadish) ಅವರು ಬಿಗ್‌ ಬಾಸ್‌ ಮನೆಯೊಳಗೆ ಹೋಗುವುದು ಕನ್ಫರ್ಮ್‌ ಆಗಿದೆ. ಇವರು ಸ್ವರ್ಗ – ನರಕಕ್ಕೆ ಹೋಗುವುದು ಸಸ್ಪೆನ್ಸ್‌ ಆಗಿ ಉಳಿದಿದೆ.

ಇದನ್ನೂ ಓದಿ: BBK11: ಬಿಗ್‌ ಬಾಸ್‌ ಮನೆಯ 2ನೇ ಸ್ಪರ್ಧಿ ರಿವೀಲ್.. ಯಾರೂ ನಿರೀಕ್ಷೆ ಮಾಡದ ಸ್ಪರ್ಧಿ ಇವರು

ಇದೀಗ ಬಿಗ್‌ ಬಾಸ್‌ ಮನೆಗೆ ಹೋಗುವ ಮೂರನೇ ಸ್ಪರ್ಧಿ ಯಾರು ಎನ್ನುವುದು ರಿವೀಲ್‌ ಆಗಿದೆ.

3ನೇ ಸ್ಪರ್ಧಿ ಇವರೇ… ಇಬ್ಬರು ಸ್ಪರ್ಧಿಗಳ ಬಳಿಕ ಬಿಗ್‌ ಬಾಸ್‌ ಮನೆಗೆ 3ನೇ ಸ್ಪರ್ಧಿಯಾಗಿ ಚೈತ್ರಾ ಕುಂದಾಪುರ ಎಂಟ್ರಿ ಆಗಿದ್ದಾರೆ. ಅವರು ʼಸ್ವರ್ಗದ ಮನೆಗೋ ಅಥವಾ ನರಕದ ಮನೆಗೋ ಎನ್ನುವುದನ್ನು ಪ್ರೇಕ್ಷಕರು ವೋಟ್‌ ಮಾಡುವ ಆಯ್ಕೆ ಮಾಡಬಹುದಾಗಿದೆ.

Advertisement

ಯಾರು ಇವರು.. 

ಹಿಂದೂ ಫೈರ್‌ ಬ್ರ್ಯಾಂಡ್‌ ಎಂದೇ ಖ್ಯಾತಿಯಾಗಿದ್ದ ಕುಂದಾಪುರ ಮೂಲದ ಚೈತ್ರಾ ಈ ಬಾರಿ ಬಿಗ್‌ ಬಾಸ್‌ ಮನೆಯೊಳಗೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಕಳೆದ ಕೆಲ ಸಮಯದ ಹಿಂದಷ್ಟೇ ಉದ್ಯಮಿಯೊಬ್ಬರಿಗೆ ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ಹೇಳಿ ವಂಚನೆ ಮಾಡಿದ ಆರೋಪ ಅವರ ಮೇಲೆ ಕೇಳಿ ಬಂದಿತ್ತು. ಈ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿತ್ತು. ಜಾಮೀನಿನ ಮೇಲೆ ಅವರು ಬಿಡುಗಡೆ ಆಗಿದ್ದಾರೆ.

ಅವರ ಭಾಷಣದ ತುಣುಕು ಹಾಗೂ ಬಂಧನವಾದ ಸಂದರ್ಭದಲ್ಲಿನ ಪ್ರತಿಭಟಿಸಿದ ಝಲಕ್‌ ನ್ನು ಅವರ ಕ್ಯಾರೆಕ್ಟರ್‌ ಇಂಟ್ರೋದಲ್ಲಿ ತೋರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next