Advertisement

ನಾಳೆ MCD ಫ‌ಲಿತಾಂಶ: AAP ಸೋತರೆ ಕೇಜ್ರಿ CM ಸ್ಥಾನಕ್ಕೇ ಕುತ್ತು?

03:51 PM Apr 25, 2017 | Team Udayavani |

ಹೊಸದಿಲ್ಲಿ: ದೆಹಲಿ ಮಹಾ ನಗರ ಪಾಲಿಕೆ ಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷ ಸೋತರೆ 34 ಶಾಸಕರು ಅರವಿಂದ್‌ ಕೇಜ್ರಿವಾಲ್‌ ಅವರ ರಾಜೀನಾಮೆ ಕೇಳಲಿದ್ದಾರೆ ಎಂದು ಬಿಜೆಪಿ ವಕ್ತಾರ ತೇಜಿಂದರ್‌ ಪಾಲ್‌ ಎಸ್‌ ಬಗ್ಗಾ ಅವರು ಟ್ವೀಟ್‌ ಮಾಡಿದ್ದಾರೆ. 

Advertisement

ನಾಳೆ ಎಪ್ರಿಲ್‌ 26 ರಂದು ಫ‌ಲಿತಾಂಶ ಪ್ರಕಟವಾಗಲಿದ್ದು, ಬಹುತೇಕ ಸಮೀಕ್ಷೆಗಳು ಬಿಜೆಪಿ ಭರ್ಜರಿ ಜಯ ಸಾಧಿಸುವುದಾಗಿ ಹೇಳಿವೆ. 270 ಸ್ಥಾನಗಳ ಪೈಕಿ ಬಿಜೆಪಿ 200ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸಲಿದೆ ಎಂದು 2 ಸಮೀಕ್ಷೆಗಳಲ್ಲಿ ಹೇಳಲಾಗಿದೆ. ಅಭ್ಯರ್ಥಿಗಳ ಅಕಾಲಿಕ ನಿಧನನಿಂದಾಗಿ 2 ಕೇತ್ರಗಳ ಮತದಾನ ಮುಂದೂಡಲಾಗಿತ್ತು. 

ಮತದಾನೋತ್ತರ ಸಮೀಕ್ಷೆಗಳು  ನಿಜವಾದುದ್ದೇ ಹೌದಾದಲ್ಲಿ ಚಳುವಳಿ ಆರಂಭಿಸುವುದಾಗಿ ಕೇಜ್ರಿವಾಲ್‌ ಹೇಳಿದ್ದಾರೆ. 

ಚಳುವಳಿಯಿಂದಲೇ ಹುಟ್ಟಿಕೊಂಡ ಆಪ್‌ ತನ್ನ ದಾರಿಯಿಂದ ಹಿಂತಿರುಗುವ ಮಾತೇ ಇಲ್ಲ ಎಂದು ಕೇಜ್ರವಾಲ್‌ ಹೇಳಿದ್ದಾರೆ. 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next