Advertisement

ಕೊಡಗಿನ ಸಂಪಾಜೆ ಬಳಿ ಮೂವರು ನಕ್ಸಲರು ಪ್ರತ್ಯಕ್ಷ !

08:30 AM Feb 03, 2018 | Team Udayavani |

ಮಡಿಕೇರಿ:ಇಲ್ಲಿನ ಸಂಪಾಜೆಯ ಗುಡ್ಡೆಗದ್ದೆ ಬಳಿ ಮೂವರು ನಕ್ಸಲರು ಮನೆಯೊಂದಕ್ಕೆ ನುಗ್ಗಿ ಬೆದರಿಸಿ ಅಡುಗೆ ಸಾಮಗ್ರಿಗಳನ್ನು ಪಡೆದಿರುವ ಆತಂಕಕಾರಿ ಘಟನೆ ಶುಕ್ರವಾರ ಸಂಜೆ ನಡೆದಿರುವ ಬಗ್ಗೆ ವರದಿಯಾಗಿದೆ. 

Advertisement

ಗಣೇಶ ಎನ್ನುವವರ ಮನೆಗೆ ಆಗಮಿಸಿದ ಮೂವರು ಶಸ್ತ್ರಧಾರಿ ನಕ್ಸಲರು ಬೆದರಿಸಿ ಅಕ್ಕಿ, ಖಾರದಪುಡಿ ಸೇರಿದಂತೆ ಅಡುಗೆ ಸಾಮಗ್ರಿಗಳನ್ನು ಅಂಗಡಿಯಿಂದ ತರಿಸಿಕೊಂಡು ಕಾಡಿನಲ್ಲಿ ಮರೆಯಾಗಿದ್ದಾರೆ ಎಂದು ಹೇಳಲಾಗಿದೆ. 

ವಿಚಾರ ತಿಳಿದ ಮಡಿಕೇರಿ ಗ್ರಾಮಾಂತರ ಪೊಲೀಸರು ಎಫ್ಐಆರ್‌ ದಾಖಲಿಸಿ ಸ್ಥಳಕ್ಕೆ ದೌಡಾಯಿಸಿದ್ದಾರೆ. 

ನಕ್ಸಲ್‌ ನಿಗ್ರಹ ಪಡೆ ಸ್ಥಳಕ್ಕೆ ತೆರಳುತ್ತಿದ್ದು ಕೂಂಬಿಂಗ್‌ ಕಾರ್ಯಾಚರಣೆ ನಡೆಸಲಿದೆ ಎಂದು ತಿಳಿದು ಬಂದಿದೆ. 

ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗಕ್ಕೆ ಹೊಂದಿಕೊಂಡಂತಿರುವ ಗ್ರಾಮ ಇದಾಗಿದ್ದು ಕೆಲ ದಿನಗಳ ಹಿಂದೆ ಶಿರಾಡಿಯಲ್ಲಿ ಕಾಣಿಸಿಕೊಂಡಿದ್ದ ಮೂವರು ನಕ್ಸಲರೇ ಇವರು ಎಂದು ಹೇಳಲಾಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next