Advertisement

ಉ.ಪ್ರ. ರಸ್ತೆ ಅಪಘಾತ: ಮೂವರ ಸಾವು, ಇಬ್ಬರಿಗೆ ಗಾಯ

05:24 PM Oct 28, 2017 | Team Udayavani |

ಭಡೋಹಿ, ಉ.ಪ್ರ. : ಭಡೋಹಿ ಜಿಲ್ಲೆಯ ಚಿನೋರಾ ಗ್ರಾಮಕ್ಕೆ ಸಮೀಪದಲ್ಲಿ  ಎರಡು ಮೋಟಾರ್‌ ಬೈಕ್‌ ಗಳು  ಟ್ರ್ಯಾಕ್ಟರ್‌ಗೆ ಢಿಕ್ಕಿ ಹೊಡೆದ ಪರಿಣಾಮವಾಗಿ ಮೂವರು ಮೃತಪಟ್ಟು ಇತರ ಇಬ್ಬರು ಗಂಭೀರವಾಗಿ ಗಾಯಗೊಂಡರೆಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

Advertisement

ಸೋದರ ಸಂಬಂಧಿಗಳಾಗಿರುವ 19ರಿಂದ 22 ವರ್ಷ ಪ್ರಾಯದ ಐವರು ಎರಡು ಬೈಕ್‌ಗಳಲ್ಲಿ ಅಲಹಾಬಾದ್‌ನಿಂದ ಮರಳುತ್ತಿದ್ದಾಗ ನಿನ್ನೆ ಶುಕ್ರವಾರ ರಾತ್ರಿ ನಿಂತಿದ್ದ ಟ್ರ್ಯಾಕ್ಟರ್‌ಗೆ ಢಿಕ್ಕಿ ಹೊಡೆದರು. 

ಬೈಕ್‌ ಸವಾರರ ಪೈಕಿ ಅನಿಲ್‌ ಮತ್ತು ಪ್ರದೀಪ್‌ ಗೌತಮ್‌ ಸ್ಥಳದಲ್ಲೇ ಮೃತಪಟ್ಟರು. ಗಂಭೀರ ವಾಗಿ ಗಾಯಗೊಂಡಿದ ಅಜೇಯ್‌ ಗೌತಮ್‌ ಇಂದು ಬೆಳಗ್ಗೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ. ಇನ್ನಿಬ್ಬರು ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಅಲಹಾಬಾದ್‌ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಸರ್ಕಲ್‌ ಪೊಲೀಸ್‌ ಆಫೀಸರ್‌ ಅಭಿಷೇಕ್‌ ಪಾಂಡೆ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next