Advertisement

ರಾಜ್ಯದಲ್ಲಿ ಒಂದೇ ದಿನ 248 ಮಂದಿಯಲ್ಲಿ ದೃಢಪಟ್ಟ ಕೋವಿಡ್-19 ಸೋಂಕು

05:53 PM May 29, 2020 | keerthan |

ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಅತ್ಯಂತ ವೇಗದಲ್ಲಿ ಏರಿಕೆಯಾಗುತ್ತಿದೆ. ಇಂದಿನ ಸಂಜೆಯ ವರದಿಯಲ್ಲಿ ಮತ್ತೆ 70 ಜನರಿಗೆ ಕೋವಿಡ್ ಸೋಂಕು ದೃಢವಾಗಿದೆ. ಇದರಿಂದ ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ ಒಟ್ಟು 248 ಮಂದಿಗೆ ಸೋಂಕು ದೃಢವಾಗಿದೆ.

Advertisement

ರಾಜ್ಯದ ಮೂರು ಜಿಲ್ಲೆಗಳಲ್ಲಿ ಇಂದು ಕೋವಿಡ್-19 ಸೋಂಕು ಸ್ಪೋಟವಾಗಿದೆ. ಕಲಬುರಗಿಯಲ್ಲಿ 61 ಪ್ರಕರಣ, ಯಾದಗಿರಿಯಲ್ಲಿ 60 ಪ್ರಕರಣ ಮತ್ತು ರಾಯಚೂರಿನಲ್ಲಿ 62 ಸೋಂಕು ಪ್ರಕರಣಗಳು ದೃಢವಾಗಿದೆ.

ಬೆಂಗಳೂರು ನಗರದಲ್ಲಿ 12 ಮಂದಿ, ಮಂಡ್ಯದಲ್ಲಿ ಇಬ್ಬರು, ಉಡುಪಿಯಲ್ಲಿ 15, ದಾವಣಗೆರೆ, ಹಾಸನ, ವಿಜಯಪುರದಲ್ಲಿ ತಲಾ ನಾಲ್ಕು, ಚಿಕ್ಕಬಳ್ಳಾಪುರದಲ್ಲಿ ಐದು, ಬಳ್ಳಾರಿ ಒಂಬತ್ತು ಪ್ರಕರಣಗಳು ದೃಢವಾಗಿದೆ. ಇದರೊಂದಿಗೆ ಮೈಸೂರು, ತುಮಕೂರಿನಲ್ಲಿ ತಲಾ ಎರಡು, ಧಾರವಾಡ, ಚಿತ್ರದುರ್ಗ, ಶಿವಮೊಗ್ಗ ಮತ್ತು ಬೆಂಗಳೂರು ಗ್ರಾಮೀಣ ಜಿಲ್ಲೆಯಲ್ಲಿ ತಲಾ ಒಂದು ಸೋಂಕು ಪ್ರಕರಣಗಳು ವರದಿಯಾಗಿದೆ.

ರಾಜ್ಯದಲ್ಲಿ ಮತ್ತೊಂದು ಸಾವಿನ ಪ್ರಕರಣ ವರದಿಯಾಗಿದ್ದು, ಮೇ.24ರಂದು ರಸ್ತೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದ 50 ವರ್ಷದ ಮಹಿಳೆ ಗುರುವಾರ ಸಾವನ್ನಪ್ಪಿದ್ದಾರೆ. ಕೋವಿಡ್ ಪರೀಕ್ಷೆಯಲ್ಲಿ ಈಕೆಗೆ ಸೋಂಕು ತಾಗಿರುವುದು ದೃಢವಾಗಿದೆ.

ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2781ಕ್ಕೆ ಏರಿಕೆಯಾಗಿದೆ. ಇಂದು 60 ಮಂದಿ ಬಿಡುಗಡೆಯಾಗಿದ್ದು, ಒಟ್ಟು 894 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ ಇದುವರೆಗೆ 48 ಮಂದಿ ಸೋಂಕಿನ ಕಾರಣದಿಂದ ಸಾವನ್ನಪ್ಪಿದ್ದು, ಇಬ್ಬರು ಕೋವಿಡ್ ಅಲ್ಲದ ಕಾರಣದಿಂದ ಮರಣ ಹೊಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next