Advertisement

ಯಜಮಾನನಿಗೆ 2 ವರ್ಷ ಸೆಲ್ಫಿ ಶೇರ್‌ ಮಾಡಿದ ರಶ್ಮಿಕಾ

11:56 AM Mar 02, 2021 | Team Udayavani |

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಮತ್ತು ರಶ್ಮಿಕಾ ಮಂದಣ್ಣ ಜೋಡಿಯಾಗಿ ಅಭಿನಯಿಸಿದ್ದ “ಯಜಮಾನ’ ಚಿತ್ರ 2019ರ ಮಾರ್ಚ್‌ 1ರಂದು ರಾಜ್ಯಾದ್ಯಂತ ತೆರೆಕಂಡಿತ್ತು. ಇದೇ ಮಾರ್ಚ್‌ 1ಕ್ಕೆ “ಯಜಮಾನ’ ಚಿತ್ರಕ್ಕೆ 2 ವರ್ಷ. ಈ ಖುಷಿಯನ್ನು ನಟಿ ರಶ್ಮಿಕಾ ಮಂದಣ್ಣ ಮೆಲುಕು ಹಾಕಿದ್ದಾರೆ.

Advertisement

“ಯಜಮಾನ’ ಚಿತ್ರ ತೆರೆಕಂಡು ಎರಡು ವರ್ಷ ತುಂಬಿದ ಹಿನ್ನೆಲೆಯಲ್ಲಿ, ರಶ್ಮಿಕಾ ಮಂದಣ್ಣ, ನಟ ದರ್ಶನ್‌ ಜೊತೆ ಇರುವ ಸೆಲ್ಫಿಯನ್ನು ಶೇರ್‌ ಮಾಡಿದ್ದಾರೆ. “ಯಜಮಾನ’ ಚಿತ್ರದ “ಒಂದು ಮುಂಜಾನೆ…’ ಹಾಡಿನ ಶೂಟಿಂಗ್‌ ವೇಳೆಯಲ್ಲಿ ಕ್ಲಿಕ್ಕಿಸಿಕೊಂಡಿದ್ದ ಈ ಸೆಲ್ಫಿಯ

ಜೊತೆ, ಚಿತ್ರತಂಡದ ಒಟ್ಟಿಗೆ ಇರುವ ಫೋಟೋವನ್ನು ಸಹ ರಶ್ಮಿಕಾ ತಮ್ಮ ಟ್ವಿಟ್ಟರ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. “ಕಿರಿಕ್‌ ಪಾರ್ಟಿ’, “ಅಂಜನಿಪುತ್ರ’, “ಚಮಕ್‌’ ಚಿತ್ರದ ಬಳಿಕ ರಶ್ಮಿಕಾ ಮಂದಣ್ಣ ಕನ್ನಡದಲ್ಲಿ ಅಭಿನಯಿಸಿದ ನಾಲ್ಕನೇ ಚಿತ್ರ “ಯಜಮಾನ’ ಆಗಿತ್ತು. ಮೊದಲ ಬಾರಿಗೆ ದರ್ಶನ್‌ ಅವರೊಂದಿಗೆ “ಯಜಮಾನ’ ಚಿತ್ರದಲ್ಲಿ ತೆರೆಹಂಚಿಕೊಂಡಿದ್ದ ರಶ್ಮಿಕಾ, ತೆರೆಮೇಲೆ ಕಾವೇರಿ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ : ಹೊಸಬರ ಹಾರರ್‌ ಅನಘ ರಿಲೀಸ್‌ಗೆ ರೆಡಿ

ಸಾಹೋ ನಿರ್ದೇಶಕ ಸುಜಿತ್‌ ಜೊತೆ ಕಿಚ್ಚನ ಹೊಸಚಿತ್ರ? :

Advertisement

“ಸಾಹೋ’ ಚಿತ್ರದ ನಿರ್ದೇಶಕ ಸುಜಿತ್‌ ಇತ್ತೀಚೆಗೆ ನಟ ಕಿಚ್ಚ ಸುದೀಪ್‌ ಅವರನ್ನು ಭೇಟಿ ಮಾಡಿದ್ದಾರೆ. ಮೂಲಗಳ ಪ್ರಕಾರ, ಸುದೀಪ್‌ ಅವರಿಗೆ ಹೊಂದಿಕೆಯಾಗುವಂತ ಕಥೆಯೊಂದನ್ನು ಸಿದ್ಧಪಡಿಸಿರುವ ಸುಜಿತ್‌ ಅದನ್ನು ಹೇಳುವ ಸಲುವಾಗಿಯೇ ಹೈದರಾಬಾದ್‌ನಿಂದ ಬೆಂಗಳೂರುವರೆಗೆ ಬಂದಿದ್ದಾರೆ ಎನ್ನಲಾಗಿದೆ. ಸದ್ಯ ಸುಜಿತ್‌ ಮತ್ತು ಸುದೀಪ್‌ ಅವರೊಂದಿಗೆ ಮೊದಲ ಸುತ್ತಿನ ಚರ್ಚೆ ನಡೆದಿದ್ದು, ಎಲ್ಲವೂ ಇನ್ನೂ ಪ್ರಾಥಮಿಕ ಹಂತದಲ್ಲಿದೆ ಎನ್ನಲಾಗಿದೆ. ಸುಜಿತ್‌ ಮತ್ತು ಸುದೀಪ್‌ ಭೇಟಿಯ ವಿಷಯ ವನ್ನು ಸುದೀಪ್‌ ಆಪ್ತಬಳಗ ಖಚಿತಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next