Advertisement

ದೇವಿಗೆ ಸೀರೆ ಬಿಟ್ಟು ಚೂಡಿದಾರ ಅಲಂಕಾರ!

11:50 AM Feb 06, 2018 | Harsha Rao |

ನಾಗಪಟ್ಟಿನಂ: ಇಲ್ಲಿಯ ಮಯಿಲಾದುಥುರೈ ದೇವಸ್ಥಾನದಲ್ಲಿ ದೇವಿಗೆ ಸೀರೆಯ ಬದಲು ಚೂಡಿದಾರದಿಂದ ಅಲಂಕಾರ ಮಾಡಿದ ಇಬ್ಬರು ಅರ್ಚಕರನ್ನು ಅಮಾನತು ಮಾಡಿದ ಘಟನೆ ನಡೆದಿದೆ. ದೇವಿಗೆ ಸೀರೆ ಹೊರತಾಗಿ ಬೇರೆ ಉಡುಗೆ ತೊಡಿಸುವುದು ಆಗಮ ಸಂಪ್ರದಾಯಕ್ಕೆ ವಿರುದ್ಧವಾಗಿದೆ ಎಂಬ ಕಾರಣಕ್ಕೆ ತಿರುವವದುಥರೈ ಅಧೀನಂ ಮಠದ ಮುಖ್ಯಸ್ಥರಾದ ಅಂಬಾಲವನ ದೇಸಿಗ ಪರಮಾಚಾರ್ಯ ಸ್ವಾಮಿಗಳು ಈ ನಿರ್ಧಾರ ಕೈಗೊಂಡಿದ್ದಾರೆ. ಈ ಹಿಂದೆ ಪವಿತ್ರ ದಿನದಂದು ದೇವಿಗೆ ಗುಜರಾತಿ ಶೈಲಿಯಲ್ಲಿ ವಸ್ತ್ರ ತೊಡಿಸಿದ್ದಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಪ್ರೇರಣೆಗೊಂಡ ಅರ್ಚಕರು, ದೇವಿಗೆ ಚೂಡಿದಾರ ತೊಡಿಸಿದ್ದರು. ಈ ಫೋಟೋ ವೈರಲ್‌ ಆದ ಬಳಿಕ, ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next