Advertisement

ಆ 13 ದಿನಗಳು… ಹಾರ್ಡಿಂಜ್‌ ಸೇತುವೆ ಭಾರತ ಸೇನೆಯ ವಶಕ್ಕೆ

11:51 AM Dec 12, 2021 | Team Udayavani |

ನವದೆಹಲಿ: ಡಿ.12 1971, ಭಾರತೀಯ ಸೇನೆಯು ಹಾರ್ಡಿಂಜ್‌ ಸೇತುವೆ, ಖೇತ್ಲಾಲ್‌ ಮತ್ತು ಮಧುಪುರವನ್ನು ವಶಪಡಿಸಿಕೊಂಡಿತು. ತಾತ್ಕಾಲಿಕ ಸೇನಾಪಡೆಯು ಕೋಲ್ಕತದಿಂದ ಚಿತ್ತಗಾಂಗ್‌ನತ್ತ ತೆರಳಿತು.

Advertisement

ಅಂದು ಉರಿ ಸೆಕ್ಟರ್‌ನಲ್ಲಿ ಸಿಖ್‌ ರೆಜಿಮಂಟಿನ ಗಸ್ತುಪಡೆಯ 2ನೇ ಕಮಾಂಡಿಗ್‌ ಆಫೀಸರ್‌ ಸುಬೇದಾರ್‌ ಬಿಶನ್‌ ಸಿಂಗ್‌ ಮತ್ತು ಮೂರ್ನಾಲ್ಕು ಸೈನಿಕರ ತಂಡ ಗಸ್ತು ತಿರುಗುತ್ತಿತ್ತು. ಆ ವೇಳೆ ಪಾಕ್‌ ಸೈನಿಕರ ತಂಡವೊಂದು ಎದುರಾಗುತ್ತದೆ. ತಕ್ಷಣ ಎಚ್ಚೆತ್ತುಕೊಂಡ ಬಿಶನ್‌, ಶತ್ರು ಪಡೆಯ ಮೇಲೆರಗಿ, ಇಬ್ಬರು ಸೈನಿಕರನ್ನು ಬರಿ ಕೈನಲ್ಲೇ ಸಾಯಿಸುತ್ತಾರೆ.

ಇದನ್ನೂ ಓದಿ;- ಸಿನಿಮಾಗಿಂತ ರಂಗಕಲೆಗಿದೆ ಹೆಚ್ಚಿನ ಶಕ್ತಿ

ಹೊಡೆದಾಟದಲ್ಲಿ ತೀವ್ರ ಗಾಯವಾದರೂ ಹಠ ಬಿಡದೆ, ಶತ್ರು ತಂಡವನ್ನು ಪೂರ್ತಿಯಾಗಿ ಮುಗಿಸಿಬಿಡುತ್ತಾರೆ. ಅಷ್ಟರಲ್ಲಿ ಶತ್ರುಗಳ ಮತ್ತೂಂದು ತಂಡ ನಮ್ಮ ಸೈನಿಕರ ಮೇಲೆರಗಿದ್ದು, ಅದನ್ನೂ ನಮ್ಮ ಸೇನೆ ಹೊಡೆದುರುಳಿಸಿತು.

Advertisement

Udayavani is now on Telegram. Click here to join our channel and stay updated with the latest news.

Next