Advertisement

18 AIADMK ಶಾಸಕರ ಅನರ್ಹತೆ: Speaker ನಿರ್ಧಾರ ಎತ್ತಿಹಿಡಿದ ಹೈಕೋರ್ಟ್

11:13 AM Oct 25, 2018 | Team Udayavani |

ಚೆನ್ನೈ : ಹದಿನೆಂಟು ಎಐಎಡಿಎಂಕೆ ಶಾಸಕರನ್ನು ಅನರ್ಹಗೊಳಿಸಿದ್ದ ತಮಿಳು ನಾಡು ಅಸೆಂಬ್ಲಿ ಸ್ಪೀಕರ್‌ ನಿರ್ಧಾರವನ್ನು ಮದ್ರಾಸ್‌ ಹೈಕೋರ್ಟ್‌ ಎತ್ತಿ ಹಿಡಿದಿದೆ. ಅನರ್ಹಗೊಳಿಸಲಾಗಿದ್ದ 18 ಎಐಎಡಿಎಂಕೆ ಶಾಸಕರು ಬದಿಗೊತ್ತಲ್ಪಟ್ಟಿದ್ದ ಪಕ್ಷದ ನಾಯಕ ಟಿ ಟಿ ವಿ ದಿನಕರನ್‌ ಗೆ ನಿಷ್ಠೆ ತೋರಿದ್ದರು. 

Advertisement

“ಮದ್ರಾಸ್‌ ಹೈಕೋರ್ಟ್‌ ನ ಈ ತೀರ್ಪಿನಿಂದ ನಮಗೇನೂ ಹಿನ್ನಡೆಯಾಗಿಲ್ಲ. ಇದು ನಮಗೊಂದು ಅನುಭವ; ನಾವು ಪರಿಸ್ಥಿತಿಯನ್ನು ಎದುರಿಸುವೆವು. ಅನರ್ಹಗೊಂಡಿರುವ 18 ಶಾಸಕರೊಂದಿಗೆ ಸಭೆಯ ಬಳಿಕ ನಾವು ನಮ್ಮ ಮುಂದಿನ ಕಾರ್ಯಯೋಜನೆಯನ್ನು ನಿರ್ಧರಿಸುವೆವು’ ಎಂದು  ದಿನಕರನ್‌ ಹೇಳಿದರು.

ಕಳೆದ ವರ್ಷ ಸೆ.18ರಂದು 18 ಎಐಎಡಿಎಂಕೆ ಶಾಸಕರನ್ನು ತಮಿಳು ನಾಡು ಅಸೆಂಬ್ಲಿ ಸ್ಪೀಕರ್‌ ಪಿ ಧನಪಾಲ್‌ ಅವರು ಪಕ್ಷಾಂತರ ತಡೆ ಕಾಯಿದೆಯಡಿ ಅನರ್ಹಗೊಳಿಸಿದ್ದರು. ಈ ಶಾಸಕರು ಮುಖ್ಯಮಂತ್ರಿ ಕೆ ಪಳನಿಸ್ವಾಮಿ ಮೇಲೆ ತಮಗೆ ವಿಶ್ವಾಸವಿಲ್ಲವೆಂದು ಹೇಳಿ ರಾಜ್ಯಪಾಲರನ್ನು ಭೇಟಿಯಾಗಿದ್ದರು. 

ಕಳೆದ ಜೂನ್‌ 14ರಂದು ಮದ್ರಾಸ್‌ ಹೈಕೋರ್ಟ್‌ ಶಾಸಕರ ಅನರ್ಹತೆಗೆ ಸಂಬಂಧಿಸಿದಂತೆ ವಿಭಜಿತ ತೀರ್ಪು ನೀಡಿತ್ತು. ಚೀಫ್ ಜಸ್ಟಿಸ್‌ ಇಂದಿರಾ ಬ್ಯಾನರ್ಜಿ ಅವರು ತಮಿಳು ನಾಡು ಸ್ಪೀಕರ್‌ ಪಿ ಧನಪಾಲ್‌ ಅವರ ನಿರ್ಧಾರವನ್ನು ಎತ್ತಿ ಹಿಡಿದಿದ್ದರೆ ನ್ಯಾಯಾಧೀಶ ಸುಂದರ್‌ ಅವರು ಸ್ಪೀಕರ್‌ ಆದೇಶವನ್ನು ವಜಾ ಮಾಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next