Advertisement

Mumbai: ಗಣಪತಿ ವಿಸರ್ಜನೆ ವೇಳೆ 12 ಸಾವು

09:09 PM Sep 29, 2023 | Team Udayavani |

ಮುಂಬೈ: ಗಣೇಶೋತ್ಸವದ ಹತ್ತನೇ ದಿನವಾದ ಗುರುವಾರ ಗಣಪತಿ ವಿಸರ್ಜನೆ ಸಂದರ್ಭದಲ್ಲಿ ನಡೆದ ಪ್ರತ್ಯೇಕ ದುರ್ಘ‌ಟನೆಗಳಲ್ಲಿ ಮಹಾರಾಷ್ಟ್ರದಲ್ಲಿ ಕನಿಷ್ಠ 12 ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅನಂತ ಚತುರ್ದಶಿ ಹಿನ್ನೆಲೆಯಲ್ಲಿ ಅನೇಕ ಕಡೆಗಳಲ್ಲಿ ಗಣಪತಿ ವಿರ್ಸಜನೆ ನಡೆಯಿತು.

Advertisement

ಈ ವೇಳೆ ನಾಸಿಕ್‌ನ ಪಂಚವಟಿಯಲ್ಲಿ ಮೂವರು, ನಾಸಿಕ್‌ ರಸ್ತೆಯಲ್ಲಿ ಮೂವರು ನೀರಿನಲ್ಲಿ ಮುಳುಗಿ ಅಸುನೀಗಿದ್ದಾರೆ. ಅದೇ ರೀತಿ ಸತಾರಾದ ಉಂಬ್ರಜ್‌, ನಾಂದೇಡ್‌ನ‌ ವಜೀರಾಬಾದ್‌ ಮತ್ತು ರಾಯ್‌ಗಢದ ಕರ್ಜತ್‌ನಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಮುಂಬೈನ ಜುಹು ಬೀಚ್‌ನಲ್ಲಿ 16 ವರ್ಷದ ಬಾಲಕನೊಬ್ಬ ನೀರುಪಾಲಾಗಿದ್ದಾನೆ. ರತ್ನಗಿರಿ ಜಿಲ್ಲೆಯಲ್ಲಿ ಗಣಪತಿ ವಿಸರ್ಜನೆ ಮೆರವಣಿಗೆಯಲ್ಲಿ ವಾಹನದ ಬ್ರೇಕ್‌ ಫೇಲ್ಯೂರ್‌ ಆಗಿ ಇಬ್ಬರು ನಿಧನರಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next