Advertisement

UP ಮತ್ತೆ ಹಳಿ ತಪ್ಪಿದ ರೈಲು; 50ಕ್ಕೂ ಹೆಚ್ಚು ಜನರಿಗೆ ಗಾಯ

07:22 AM Aug 23, 2017 | |

ಔರೈಯಾ: ಕೈಫಿಯತ್‌ ಎಕ್ಸ್‌ಪ್ರೆಸ್‌ ರೈಲಿನ 10 ಬೋಗಿಗಳು ಹಳಿ ತಪ್ಪಿದ ಪರಿಣಾಮ 50ಕ್ಕೂ ಅಧಿಕ ಜನ ಗಂಭೀರ ಗಾಯಗೊಂಡ ಘಟನೆ ಬುಧವಾರ ನಸುಕಿನ ಜಾವ ಉತ್ತರ ಪ್ರದೇಶದ ಔರೈಯಾ ನಗರದಲ್ಲಿ ನಡೆದಿದೆ.

Advertisement

ಅಜಂಘರ್‌ನಿಂದ ದೆಹಲಿಗೆ ತೆರಲುತ್ತಿದ್ದ ಕೈಫಿಯತ್‌ ಎಕ್ಸ್‌ಪ್ರೆಸ್‌ ರೈಲು ನಸುಕಿನ ಜಾವ 2 50ರ ಸುಮಾರಿಗೆ ಔರೈಯಾ ನಗರ ಬಳಿ ರೈಲಿನ ಇಂಜಿನ್ ಡಂಪರ್‌ಗೆ ಡಿಕ್ಕಿ ಹೊಡೆದು ಹಳಿ ತಪ್ಪಿದೆ ಎಂದು ತಿಳಿದು ಬಂದಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಘಟನೆಯಲ್ಲಿ 50ಕ್ಕೂ ಹೆಚ್ಚನ ಜನ ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳದಲ್ಲಿ ರಕ್ಷಣಾ ಕಾರ್ಯ ಚುರುಕುಗೊಂಡಿದೆ.

ಕಳೆದ ಶನಿವಾರ ಮುಜಾಫರ್‌ನಗರದಲ್ಲಿ ಉತ್ಕಲ್‌ ಎಕ್ಸ್‌ಪ್ರೆಸ್‌ ಹಳಿ ತಪ್ಪಿ 22 ಮಂದಿ ಪ್ರಯಾಣಿಕರು ಸಾವನ್ನಪ್ಪಿ, 156 ಮಂದಿ ಗಾಯಗೊಂಡಿದ್ದರು. ಉತ್ತರ ಪ್ರದೇಶದಲ್ಲಿ ಒಂದೇ ವಾರದಲ್ಲಿ ಇದು ಎರಡನೇ ರೈಲು ದುರಂತವಾಗಿದ್ದು, ರೈಲು ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next