Advertisement

“ಮಿಸ್ಟರ್ ಸೋಮಶೇಖರ್ ರೆಡ್ಡಿ, ಐ ಆ್ಯಮ್ ಕಮಿಂಗ್”: ಜಮೀರ್ ಅಹಮದ್ ವಾರ್ನಿಂಗ್

10:03 AM Jan 07, 2020 | keerthan |

ಬೆಂಗಳೂರು: ಮಾಜಿ ಸಚಿವ ಜಮೀರ್ ಅಹಮದ್ ಅವರು ಸೋಮಶೇಖರ್ ರೆಡ್ಡಿಯವರಿಗೆ ಏಕವಚನದಲ್ಲಿ ಜಮೀರ್ ಅಹಮದ್ ಎಚ್ಚರಿಗೆ ನೀಡಿದ್ದಾರೆ.

Advertisement

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನಂತರ ಮಾತನಾಡಿದ ಜಮೀರ್ ಅಹಮದ್, ಸೋಮಶೇಖರ್ ರೆಡ್ಡಿಗೆ ಮಾನ ಮರ್ಯಾದೆ ಇದೆಯಾ ಎಂದು ಟೀಕಿಸಿದರು.

ಸೋಮಶೇಖರ್ ರೆಡ್ಡಿ ವಿರುದ್ದ ಸರ್ಕಾರ ಕ್ರಮ ಕೈಗೊಳ್ಳಬೇಕು. ಮುಂದಿನ ಸೋಮವಾರದ ವರೆಗೆ ಕಾಯ್ತೇನೆ. ಇಲ್ಲದೇ ಹೋದರೆ ಸೋಮಶೇಖರ್ ರೆಡ್ಡಿ ಮನೆ ಮುಂದೆ ನಾನೇ ಧರಣಿ ಕೂರುತ್ತೇನೆ. ಏನು ಮಾಡುತ್ತಾನೋ ಮೊದಲು ನನಗೇ ಮಾಡಲಿ ನೋಡೋಣ ಎಂದು ಸವಾಲೆಸೆದರು.

ಏಕವಚನದಲ್ಲಿ ಮಾತನಾಡಿದ ಜಮೀರ್ ಅಹಮದ್ ಅವರು, “ಸೋಮಶೇಖರ್ ರೆಡ್ಡಿ ಖಡ್ಗ ತರ್ತಾನೋ ಏನು ತರ್ತಾನೋ ನೋಡ್ತೀನಿ. ಮೊದಲು ನನ್ನನ್ನು ಉಫ್ ಅಂತ ಹಾರಿಸಲಿ ನೋಡೋಣ. ಸೋಮಶೇಖರ್ ರೆಡ್ಡಿಗೆ ತಾಕತ್ತಿದ್ತೆ ಏನು ಮಾಡ್ತೀಯೋ ಮಾಡ್ಕೊ! ಅವನು ಖಡ್ಗ ತಂದರೆ ನಾವು ಬಳೆ ಹಾಕ್ಕೊಂಡು ಕೂತಿಲ್ಲ ಎಂದು ಎದೆ ತಟ್ಟಿ ಸೋಮಶೇಖರ್ ರೆಡ್ಡಿಗೆ ವಾರ್ನಿಂಗ್ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next