Advertisement

ಚುಚ್ಚಿದಾಗ ನರ ಕಟ್ ಆಗಿ ಚಂದ್ರು ಸತ್ತಿದ್ದಾನೆ : ಜಮೀರ್ ಅಹ್ಮದ್ ಖಾನ್ ವಿವಾದ

02:27 PM Apr 11, 2022 | Team Udayavani |

ಬೆಂಗಳೂರು : ಚಂದ್ರು ಕೊಲೆ ಪ್ರಕರಣ ಸಂಬಂಧ ಚಾಮರಾಜಪೇಟೆ ಶಾಸಕ‌ ಜಮೀರ್ ಅಹ್ಮದ್ ಖಾನ್ ನೀಡಿರುವ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ. ‘ಚುಚ್ಚಿದಾಗ ನರ ಕಟ್ ಆಗಿ ಸತ್ತು ಹೋಗಿದ್ದಾನೆ’ ಎಂದು ಜಮೀರ್ ವ್ಯಾಖ್ಯಾನಿಸಿದ್ದಾರೆ.

Advertisement

‘ಅವನು ಕೊಲೆ ಮಾಡಬೇಕು ಎಂಬ ಉದ್ದೇಶ ಹೊಂದಿರಲಿಲ್ಲ. ಚುಚ್ಚಿದಾಗ ನರ ಕಟ್ಟಾಗಿ ಸತ್ತು ಹೋದನಂತೆ. ಅವನಿಗೆ ಕೊಲೆ ಮಾಡಬೇಕು ಅಂತ ಇರಲಿಲ್ಲ.ಆದರೆ ಅವನು ಮಾಡಿದ್ದು ತಪ್ಪು ಅವನಿಗೆ ಶಿಕ್ಷೆ ಆಗಲೇಬೇಕು.ಎಂದು ಚಾಮರಾಜ ಪೇಟೆಯಲ್ಲಿ ಶಾಸಕ ಜಮೀರ್ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

ತೊಡೆಗೆ ಚಾಕು ಚುಚ್ಚಿದ್ದಾಗ ಬ್ಲೀಡಿಂಗ್ ನಿಂತಿಲ್ಲ. ಯಾವುದೋ ನರ ಕಟ್ಟಾಗಿ ಬಿಟ್ಟಿದೆ.‌ ಬ್ಲೀಡಿಂಗ್ ನಿಂತಿಲ್ಲ. ನಿಂತಿದ್ದರೆ ಸಾಯುತ್ತಾ ಇರಲಿಲ್ಲ.ವಿಕ್ಟೋರಿಯ ಆಸ್ಪತ್ರೆಗೆ ಕರದುಕೊಂಡು ಹೋಗಿದ್ದಾರೆ ಬಳಿಕ ಸತ್ತು ಹೋಗಿದ್ದಾನೆ ಎಂದು ಹೇಳಿದ್ದು, ಈ ಹೇಳಿಕೆ ಈಗ ವಿವಾದದ ಸ್ವರೂಪ ಪಡೆದುಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next