Advertisement
“ಇಂದು ನನ್ನ ಬರ್ತ್ಡೇ. ನಮ್ಮ ಯುವಿಕ್ಯಾನ್ ಫೌಂಡೇಶನ್ ಮೂಲಕ ಕ್ಯಾನ್ಸರ್ನಿಂದ ನರಳುತ್ತಿರುವ 25 ಮಂದಿ ಮಕ್ಕಳ ಚಿಕಿತ್ಸೆಗೆ ನೆರವಾಗಲಿದ್ದೇನೆ. ಕ್ಯಾನ್ಸರ್ ಗೆದ್ದ ಬಳಿಕ ಬದುಕಿನ ಅಮೂಲ್ಯ ಉಡುಗೊರೆಯನ್ನು ನಾನಿಂದು ಅನುಭವಿಸುತ್ತಿದ್ದೇನೆ. ಕ್ಯಾನ್ಸರನ್ನು ಸೋಲಿಸಲು ನನಗೆ ಸಾಮರ್ಥ್ಯವನ್ನು ಕೊಟ್ಟ ದೇವರಿಗೆ ನಾನು ಕೃತಜ್ಞ. ದೇಶದಲ್ಲಿಂದು ಲಕ್ಷಾಂತರ ಮಂದಿ ಕ್ಯಾನ್ಸರ್ ಪೀಡಿತರು ಚಿಕಿತ್ಸೆಗೆ ಹಣವಿಲ್ಲದೆ ಪರದಾಡುತ್ತಿದ್ದಾರೆ. ನಾವು ಸ್ಥಾಪಿಸಿದ ಫೌಂಡೇ ಶನ್ನಿಂದ ಈ ಅಂತರ ಸ್ವಲ್ಪವಾದರೂ ಕಡಿಮೆ ಆಗಲಿದೆ ಎಂಬ ಸಮಾಧಾನ ನನ್ನದು’ ಎಂದು ಯುವರಾಜ್ ಟ್ವೀಟ್ ಮಾಡಿದ್ದಾರೆ. 2011ರ “ವಿಶ್ವಕಪ್ ಗೆಲುವಿನ ವರ್ಷ’ದಲ್ಲಿ ಕ್ರಿಕೆಟಿನ ಉತ್ತುಂಗದಲ್ಲಿರುವಾಗಲೇ ಯುವಿ ಮೇಲೆ ಶ್ವಾಸಕೋಶದ ಕ್ಯಾನ್ಸರ್ ಆಕ್ರಮಣ ಮಾಡಿತು. ಬಳಿಕ ಇಂಗ್ಲೆಂಡ್ನಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡರು. ಭಾರತ ತಂಡವನ್ನೂ ಪ್ರತಿನಿಧಿಸಿದರು.
Advertisement
ಬೌನ್ಸರ್, ಕ್ಯಾನ್ಸರ್ ಎರಡನ್ನೂ ಜಯಿಸಿದ ಯುವರಾಜ್ಗೆ 37ರ ಸಂಭ್ರಮ
06:00 AM Dec 13, 2018 | |
Advertisement
Udayavani is now on Telegram. Click here to join our channel and stay updated with the latest news.