Advertisement

ಮೊದಲ ರನ್‌ಗೆ 29 ಎಸೆತ ತೆಗೆದುಕೊಂಡ ಯುವರಾಜ್‌!

06:15 AM Nov 30, 2018 | Team Udayavani |

ನವದೆಹಲಿ: ರಣಜಿ ಕ್ರಿಕೆಟ್‌ ಕೂಟದ ದಿಲ್ಲಿ ವಿರುದ್ಧದ ಪಂದ್ಯದ ವೇಳೆ ಪಂಜಾಬ್‌ ತಂಡದ ಯುವರಾಜ್‌ ಸಿಂಗ್‌ ರನ್‌ಗಾಗಿ ತೀವ್ರ ಪರದಾಟ ನಡೆಸಿ ಸುದ್ದಿಯಾಗಿದ್ದಾರೆ. 

Advertisement

ವಿಶ್ವಕಪ್‌ ಗೆಲುವಿನ ಪ್ರಮುಖ ರೂವಾರಿ, ಸ್ಫೋಟಕ ಬ್ಯಾಟ್ಸ್‌ಮೆನ್‌ ಯುವರಾಜ್‌ ಕಳಪೆ ಫಾರ್ಮ್ನಿಂದ ಕಳೆದ ಒಂದೂವರೆ ವರ್ಷದಿಂದ ಪ್ರಮುಖ ಕ್ರಿಕೆಟ್‌ ಕೂಟಗಳಲ್ಲಿ ಆಡಿಲ್ಲ. ಇದೀಗ ರಣಜಿ ತಂಡಕ್ಕೆ ಆಯ್ಕೆಯಾಗಿರುವ ಅವರು ಫಿರೋಜ್‌ ಶಾ ಕೋಟ್ಲಾ ಕ್ರೀಡಾಂಗಣದಲ್ಲಿ ದಿಲ್ಲಿ ವಿರುದ್ಧದ ಪಂದ್ಯದ ವೇಳೆ ಬ್ಯಾಟಿಂಗ್‌ಗೆ ಇಳಿದರು. ಡೆಲ್ಲಿ ಬೌಲರ್‌ಗಳ ಮಾರಕ ದಾಳಿಯೆದುರು ಒಂದೊಂದು ರನ್‌ಗಳಿಸಲು ಕೂಡ ಪರದಾಟ ನಡೆಸಿದರು. ಮೊದಲ 1 ರನ್‌ ತೆಗೆಯಲು ಅವರು ಬರೋಬ್ಬರಿ 29 ಎಸೆತವನ್ನು ಎದುರಿಸಿದರು ಎನ್ನುವುದು ವಿಶೇಷ.

Advertisement

Udayavani is now on Telegram. Click here to join our channel and stay updated with the latest news.

Next