Advertisement

ಅಂಜನಾದ್ರಿಗೆ ಡಾ|ರಾಜ್ ಮೊಮ್ಮಗ ಯುವರಾಜ್ ಕುಮಾರ್ ಭೇಟಿ

12:42 PM Apr 17, 2022 | Team Udayavani |

ಗಂಗಾವತಿ: ಕಿಷ್ಕಿಂದಾ ಅಂಜನಾದ್ರಿಗೆ ಡಾ|ರಾಘವೇಂದ್ರ ರಾಜ್ ಕುಮಾರ್ ಅವರ ಪುತ್ರ ಯುವರಾಜ್ ಕುಮಾರ್ ಪತ್ನಿ ಮತ್ತು ಕುಟುಂಬ ಸದಸ್ಯರು ಸಮೇತ ರವಿವಾರ ಭೇಟಿ ನೀಡಿ ಶ್ರೀಆಂಜನೇಯಸ್ವಾಮಿ ದರ್ಶನ ಪಡೆದರು. ದೇವಾಲಯ ಸಮಿತಿಯಿಂದ ಯುವರಾಜ್ ಕುಮಾರ್ ಹಾಗೂ ಪತ್ನಿಯನ್ನು ಸನ್ಮಾನಿಸಲಾಯಿತು.

Advertisement

ಈ ಸಂದರ್ಭದಲ್ಲಿ ಯುವರಾಜ್ ಕುಮಾರ್ ತಮ್ಮ ಚಿಕ್ಕಪ್ಪ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನು ನೆನದು ಭಾವುಕರಾದರು. ಈ ಭಾಗದಲ್ಲಿ ಪುನೀತ್ ರಾಜ್ ಕುಮಾರ್ ಅವರು ಜನರ ಪ್ರೀತಿ ಗಳಿಸಿದ್ದಾರೆ. ಇಲ್ಲಿ ರಣವಿಕ್ರಮ, ಜೇಮ್ಸ್ ಸೇರಿ ಅನೇಕ ಚಿತ್ರಗಳು ಹಂಪಿ, ಅಂಜನಾದ್ರಿ, ಜಿಂದಾಲ್, ರಾಯಚೂರು, ಬಾಗಲಕೋಟೆ ಭಾಗದಲ್ಲಿ ಚಿತ್ರೀಕರಣವಾಗಿದ್ದು ಈ ಸಂದರ್ಭದಲ್ಲಿ ಅನೇಕ ಸಾಮಾಜಿಕ ಕಾರ್ಯ ಮಾಡಿದ್ದಾರೆ. ಅಂಜನಾದ್ರಿ ಎಂದರೆ ಪುನೀತ್ ಅವರಿಗೆ ಇಷ್ಟವಾದ ಪ್ರದೇಶ. ಕುಟುಂಬದ ಯಾವುದೇ ಕಾರ್ಯಕ್ರಮವಾದರೂ ಅಂಜನಾದ್ರಿ ಬಗ್ಗೆ ಅವರು ಮಾತನಾಡುತ್ತಿದ್ದರು. ಆದ್ದರಿಂದ ಅಪ್ಪ ಅಂಜನಾದ್ರಿಗೆ ಹೋಗಿ ಬರುವಂತೆ ಹೇಳಿದ್ದರಿಂದ ತಾವು ಬಂದಿದ್ದು ಈ ಕ್ಷೇತ್ರ ಶಕ್ತಿಯುತವಾಗಿದೆ. ಪ್ರಕೃತಿ ಸೌಂದರ್ಯದಿಂದ ಕೂಡಿದೆ. ಅಭಿವೃದ್ಧಿಯ ಹೆಸರಿನಲ್ಲಿ  ಪ್ರಕೃತಿ ಸೌಂದರ್ಯ ಹಾಳು ಮಾಡದೇ ಉಳಿಸಿಕೊಂಡು ಮೂಲಸೌಕರ್ಯ ಕಲ್ಪಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಅರ್ಚಕ ಮಹಾಂತ ವಿದ್ಯಾದಾಸ ಬಾಬಾ, ಸಿಪಿಐ ಉದಯರವಿ ಸೇರಿ ಅನೇಕರಿದ್ದರು.

ಇದನ್ನೂ ಓದಿ:ಅಯೋಧ್ಯೆಯಂತೆ ಅಂಜನಾದ್ರಿ ಅಭಿವೃದ್ಧಿಗೆ ಸರಕಾರ ಬದ್ಧವಾಗಿದೆ: ಸಂಸದ ಪ್ರತಾಪ್ ಸಿಂಹ

Advertisement
Advertisement

Udayavani is now on Telegram. Click here to join our channel and stay updated with the latest news.

Next