Advertisement

ಕುಮಾರಧಾರ ನದಿಯಲ್ಲಿ ಯುವಕ ಕಣ್ಮರೆ ಪ್ರಕರಣ : ಬೆಳಗ್ಗೆಯಿಂದಲೇ ಶೋಧ ಕಾರ್ಯ, ಸುಳಿವು ಅಲಭ್ಯ

11:24 AM Aug 23, 2022 | Team Udayavani |

ಸುಬ್ರಹ್ಮಣ್ಯ : ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ನದಿಯ ಸ್ನಾನಘಟ್ಟದ ಬಳಿ ರವಿವಾರ ಸ್ನಾನಕ್ಕಿಳಿದ ಬೆಂಗಳೂರಿನ ಶಿವು(25) ಕಣ್ಮರೆಯಾಗಿದ್ದು, ಸೋಮವಾರವೂ ಹುಡುಕಾಟ ಮುಂದುವರಿದಿದೆ.

Advertisement

ಯಾವುದೇ ಸುಳಿವು ಪತ್ತೆಯಾಗಿಲ್ಲ ಸುಮಾರು 21 ಜನರ ತಂಡದೊಂದಿಗೆ ಬೆಂಗಳೂರಿನಿಂದ ಕುಕ್ಕೆಗೆ ಬಂದಿದ್ದ ಶಿವು ಎಚ್ಚರಿಕೆಯನ್ನು ನಿರ್ಲಕ್ಷಿಸಿ ಸ್ನಾನ ಘಟ್ಟದ ಬಳಿ ನೀರಿಗೆ ಹಾರಿದ್ದು, ಬಳಿಕ ಕಾಣೆಯಾಗಿದ್ದ. ಸ್ಥಳೀಯ ಈಜು ಗಾರರು, ಅಗ್ನಿಶಾಮಕ ದಳದವರ ಸಹಕಾ ರದಲ್ಲಿ ಶೋಧಕಾರ್ಯ ನಡೆಸಿದರೂ ಯಾವುದೇ ಸುಳಿವು ಲಭ್ಯವಾಗಿರಲಿಲ್ಲ. ಸೋಮವಾರ ಬೆಳಗ್ಗೆಯಿಂದಲೇ ಕಾರ್ಯಾಚರಣೆ ನಡೆಸಿದಾಗಲೂ ಯಾವುದೇ ಸುಳಿವು ದೊರೆತಿಲ್ಲ. ಸೋಮವಾರ ಗುಂಡ್ಯದ ಈಜುಗಾರರ ತಂಡ ಆಗಮಿಸಿತ್ತು. ಕಾರ್ಯಾಚರಣೆ ಬಳಿ ಸುಬ್ರಹ್ಮಣ್ಯ ಪೊಲೀಸರು, ಗೃಹ ರಕ್ಷಕದಳದವರು ಇದ್ದುಕೊಂಡು, ಕಾರ್ಯಾಚರಣೆಗೆ ಸಹಕರಿಸಿದ್ದಾರೆ.

ನಿರಂತರ ಮಳೆ, ನದಿಯಲ್ಲಿ ನೀರಿನ ಹರಿವು ಹೆಚ್ಚಳ ಹಾಗೂ ನೀರಿನ ಬಣ್ಣ ಕಂದು ಬಣ್ಣಕ್ಕೆ ತಿರುಗಿದ್ದು ಕಾರ್ಯಾಚರಣೆಗೆ ಅಡ್ಡಿಯಾಗಿದೆ. 15 ಜನ ನುರಿತ ಈಜುಗಾರರು, ಅಗ್ನಿಶಾಮಕ ದಳ, ಗ್ರಾ.ಪಂ., ಸುಬ್ರಹ್ಮಣ್ಯ ಪೊಲೀಸ್‌ ಹಾಗೂ ಕಂದಾಯ ಅಧಿಕಾರಿಗಳು, ಗೃಹರಕ್ಷಕ ದಳ, ಸ್ಥಳೀಯ ಜನ ಪ್ರತಿನಿಧಿಗಳು ಹಾಗೂ ಸ್ಥಳೀಯರು ಸೇರಿ ಸೋಮವಾರ ಬೆಳಗ್ಗೆ 7ರಿಂದ ಸಂಜೆ 7 ರ ವರೆಗೆ ನಿರಂತರ 12 ಗಂಟೆಗಳ ಕಾರ್ಯಾಚರಣೆ ನಡೆಸಿದರೂ ಯಾವುದೇ ಸುಳಿವು ಲಭ್ಯವಾಗಿಲ್ಲ. ರಾತ್ರಿಯಾದ ಕಾರಣ ಕಾರ್ಯಾಚರಣೆ ಸ್ಥಗಿತ ಮಾಡಲಾಯಿತು. ಮಂಗಳವಾರ ಬೆಳಗ್ಗೆಯಿಂದಲೇ ಕಾರ್ಯಾಚರಣೆ ಪ್ರಾರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next