Advertisement

ಗೋವಾ ಜಲಪಾತದಲ್ಲಿ ಕಾಲಿಗೆ ಹಾವು ಸುತ್ತಿಕೊಂಡು ಉಡುಪಿಯ ಯುವಕ ಸಾವು

05:26 PM Oct 09, 2022 | Team Udayavani |

ಪಣಜಿ: ರಜೆಯ ಮಜಾ ಸವಿಯಲು ಗೋವಾಕ್ಕೆ ಬಂದಿದ್ದ ಉಡುಪಿಯ ಯುವಕ ಆದಿತ್ಯ ಶೆಟ್ಟಿ (28)  ಪಾಡಿ ಜಲಪಾತದಲ್ಲಿ ಮುಳುಗಿ ಸಾವನ್ನಪ್ಪಿದ ದುರ್ಘಟನೆ ನಡೆದಿದೆ.

Advertisement

ಆದಿತ್ಯ ಶೆಟ್ಟಿ ಮೂಲತಃ ಉಡುಪಿಯವರಾಗಿದ್ದು, ಬೆಂಗಳೂರಿನ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಸ್ನೇಹಿತರೊಂದಿಗೆ ಗೋವಾ ಪ್ರವಾಸಕ್ಕೆ ಬಂದಿದ್ದು, ಪಾಡಿ ಜಲಪಾತದಲ್ಲಿ ಸ್ನಾನ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ.

ಇದನ್ನೂ ಓದಿ: ಈದ್ ಮಿಲಾದ್ ಮೆರವಣಿಗೆ ವೇಳೆ ಡಿಜೆ ಸೌಂಡ್ ವಿಚಾರಕ್ಕೆ ಸಿಪಿಐಯೊಂದಿಗೆ ಯುವಕರ ವಾಗ್ವಾದ

ಯುವಕನ ಶವವನ್ನು ಹೊರತೆಗೆದಾಗ ಆದಿತ್ಯ ಕಾಲಿಗೆ ಹಾವು ಸುತ್ತಿಕೊಂಡಿರುವುದು ಕಂಡುಬಂದಿದೆ. ನೀರಿಗೆ ಇಳಿದ ಸಂದರ್ಭದಲ್ಲಿ ಕಾಲಿಗೆ ಹಾವು ಕಚ್ಚಿರಬಹುದು ಎಂದು ಅಂದಾಜಿಸಲಾಗಿದೆ. ಈ ಯುವಕರು ಕಳೆದ ಎರಡು ದಿನಗಳ ಹಿಂದೆ ಗೋವಾಕ್ಕೆ ಬಂದು ಕಾಣಕೋಣದ ಹೋಟೆಲ್‍ವೊಂದರಲ್ಲಿ ವಾಸ್ತವ್ಯ ಹೂಡಿದ್ದರು ಎಂದು ಪೋಲಿಸರು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next