Advertisement

ಫೋಟೋ ಶೂಟ್ ವೇಳೆ ಕಾಲುವೆಗೆ ಬಿದ್ದ ಯುವಕರು: ಇಬ್ಬರ ಶವ ಪತ್ತೆ

01:41 PM Jan 23, 2021 | Team Udayavani |

ಹುಬ್ಬಳ್ಳಿ: ಫೋಟೋ ಶೂಟ್ ಗಾಗಿ ತೆರಳಿದ್ದ ವೇಳೆ  ಕಿರೇಸೂರು ಬಳಿ ಕಾಲುವೆಯಲ್ಲಿ ಬಿದ್ದ ಮೂವರ ಯುವಕರ  ಪೈಕಿ ಇಬ್ಬರ ಶವ ಪತ್ತೆಯಾಗಿದೆ.

Advertisement

ಅಣ್ಣಿಗೇರಿ ತಾಲೂಕಿನ  ಬಸಾಪುರ ಕಾಲುವೆ ಗೇಟ್ ಬಳಿ ಸನ್ನಿ ಜಾನ್ಸನ್ ಕಲ್ಲಕುಂಟ್ಲ ಮತ್ತು  ಗಜಾನನ ರಾಜಶೇಖರ ಶವಗಳು ಸಿಕ್ಕಿದ್ದು, ಇನ್ನೋರ್ವನಿಗಾಗಿ ಪೊಲೀಸರು ಹಾಗೂ ಅಗ್ನಿಶಾಮಕ ದಳದ ತಂಡದಿಂದ ಶೋಧಕಾರ್ಯ ಮುಂದುವರೆದಿದೆ.

ಘಟನೆಯ ಹಿನ್ನಲೆ:

ಫೊಟೋ ಶೂಟಿಗಾಗಿ ನಗರದಿಂದ ಐವರು ತೆರಳಿದ್ದರು. ಈ ವೇಳೆ ಜೇನು ನೊಣಗಳು ದಾಳಿ ಮಾಡಿದ ಹಿನ್ನೆಲೆಯಲ್ಲಿ ಅವುಗಳಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಮೂವರು ಕಾಲುವೆಯಲ್ಲಿ ಬಿದ್ದಿದ್ದರು. ಇನ್ನೋರ್ವ ಯುವಕ ದಡದಲ್ಲಿ ಉಳಿದಿದ್ದ. ಅವರೊಂದಿಗೆ ತೆರಳಿದ್ದ ಯುವತಿ ಪೈಪ್ ಹಿಡಿದು ಜೋತಾಡುತ್ತಿದ್ದಳು. ಇದನ್ನು ಕಂಡ ಸ್ಥಳದಲ್ಲಿದ್ದ ಕುರಿಗಾಯಿಗಳು ಯುವತಿಯನ್ನು ರಕ್ಷಿಸಿದ್ದಾರೆ.

ಇದನ್ನೂ ಓದಿ:  ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಚಾಲಕನ ಅವಾಂತರ: ನೂರಾರು ಮಂದಿಯ ಪ್ರಾಣ ಉಳಿಸಿದ ಕಾಪು ಎಸ್ಐ

Advertisement

ಜೋಶಿ ಜಂಗಮ (21), ಸನ್ನಿ ಜಾಕ್ಸನ್ ಕಲ್ಲಕುಂಟ್ಲಾ (21), ಗಜಾನನ ರಾಜಶೇಖರ (21) ನೀರು ಪಾಲಾಗಿರುವ ಯುವಕರು. ನತಾಶಾ ಭಂಡಾರಿ (19), ಸಲ್ಮಾನ್ ಪಿಳ್ಳೆ (20 ಪ್ರಾಣಾಪಾಯದಿಂದ ಪಾರಾಗಿದ್ದರು.

ಇದೀಗ ಸನ್ನಿ ಜಾಕ್ಸನ್ ಕಲ್ಲಕುಂಟ್ಲಾ ಹಾಗೂ ಗಜಾನನ ರಾಜಶೇಖರ ಶವ ಪತ್ತೆಯಾಗಿದೆ.

ಇದನ್ನೂ ಓದಿ:  3ನೇ ಅವಧಿಗೆ ಸ್ಪರ್ಧೆ ಇಲ್ಲ; ಮೋದಿ ಬದಲು ಮುಂದಿನ ಪ್ರಧಾನಿ ಹುದ್ದೆಗೆ ಯಾರು ಅರ್ಹ?ಸಮೀಕ್ಷೆ

 

Advertisement

Udayavani is now on Telegram. Click here to join our channel and stay updated with the latest news.

Next