Advertisement

ಮೂಕನಮನೆ ಫಾಲ್ಸ್‌ನಲ್ಲಿ ಸೆಲ್ಫಿ ತೆಗೆಯುವ ವೇಳೆ ಯುವಕ ಸಾವು

09:52 AM Jun 24, 2019 | Vishnu Das |

ಸಕಲೇಶಪುರ: ತಾಲೂಕಿನ ಹೆತ್ತೂರು ಸಮೀಪದ ಮೂಕನ ಮನೆ ಫಾಲ್ಸ್‌ ನಲ್ಲಿ ಈಜಲು ಇಳಿದ ಪ್ರವಾಸಿಗನೊರ್ವ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಶನಿವಾರ ಸಂಜೆ ನಡೆದಿದೆ.

Advertisement

ಬೆಂಗಳೂರಿನ ಪೀಣ್ಯ ನಿವಾಸಿಗಳಾದ ನಾಲ್ವರು ಸ್ನೇಹಿತರು ಎರಡು ಬೈಕ್‌ಗಳಲ್ಲಿ ಮಡಿಕೇರಿ ಪ್ರವಾಸ ಮುಗಿಸಿ ತಾಲೂಕಿನ ಮೂಕನಮನೆ ಫಾಲ್ಸ್‌ಗೆ ಆಗಮಿಸಿದ ನಂತರ ಧರ್ಮಸ್ಥಳಕ್ಕೆ ಹೋಗುವ ಉದ್ದೇಶ ಹೊಂದಿದ್ದರು.

ಜಲಪಾತದಲ್ಲಿ ಸ್ನಾನ ಮಾಡಲು ಇಳಿದ ನಾಲ್ವರು ಸ್ನೇಹಿತರಲ್ಲಿ
ತನುಷ್‌ (21) ಕಾಲು ಜಾರಿ ಜಲಪಾತದ ಆಳದ ಜಾಗದಲ್ಲಿ
ಬಿದ್ದ ಪರಿಣಾಮ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಸೆಲ್ಫಿ ತೆಗೆಯಲು ಮುಂದಾದ ವೇಳೆ ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.

ಯಸಳೂರು ಪೋಲಿಸರು ಹಾಗೂ ಸ್ಥಳೀಯರ ಸಹಾಯದಿಂದ ಶೋಧ ನಡೆಸಿ ಯುಕನ ಮೃತದೇಹವನ್ನು ನೀರಿನಿಂದ ಹೊರ ತೆಗೆಯಲಾಯಿತು. ಪಟ್ಟಣದ ಕ್ರಾಫ‌ರ್ಡ್‌ ಆಸ್ಪತ್ರೆಗೆ ಶವ ಪರೀಕ್ಷೆಗಾಗಿ ಮೃತ ಯುವಜನ ಶವವನ್ನು ಆ್ಯಂಬುಲೆನ್ಸ್‌ ಮುಖಾಂತರ ತರಲಾಯಿತು.

Advertisement

ಈ ಕುರಿತು ಯಸಳೂರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next