Advertisement
ಈ ವೇಳೆ ಮಾತನಾಡಿದ ಸೋಮಣ್ಣ, ರಾಜ್ಯದ ಜನ ನನ್ನ ಮೇಲಿಟ್ಟಿದ್ದ ನಂಬಿಕೆಗೆ ತಕ್ಕಂತೆ ಜನಸೇವೆ ಮಾಡಿದ್ದೇನೆ. ಚುನಾವಣೆಯಲ್ಲಿ ಸೋಲಾಗಿರಬಹುದು. ಆದರೆ ಜನರ ಹೃದಯದಲ್ಲಿ ಸ್ಥಾನ ಪಡೆದಿದ್ದೇನೆ ಎಂದು ಹೇಳಿದರು.
ಕಾಂಗ್ರೆಸ್ ಸೇರುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನೊಣವಿನಕೆರೆ ಅಜ್ಜಯ್ಯನವರ ಆಶೀ ರ್ವಾದದಂತೆ ಮೌನಕ್ಕೆ ಶರಣಾಗಿ ದ್ದೇನೆ. ಜ.6ರ ಬಳಿಕ ನಿಮ್ಮ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ ಎಂದು ಹೇಳಿದರು. ನಂಜಾವಧೂತ ಶ್ರೀಗಳಿಗಿರುವ ರೈತ ಮತ್ತು ನೀರಾವರಿ ಬಗ್ಗೆ ಕಾಳಜಿ ಮೆಚ್ಚುವಂಥದ್ದು, ರಾಜಕೀಯ ಮಾರ್ಗದರ್ಶನದ ಬಗ್ಗೆ ಶ್ರೀಗಳೊಂದಿಗೆ ಚರ್ಚಿಸಿದ್ದು, ಶ್ರೀಗಳ ಆಶೀರ್ವಾದದ ಮಾತು ಮನಸ್ಸಿಗೆ ನೆಮ್ಮದಿ ನೀಡಿದೆ ಎಂದರು.