Advertisement

ಜ.6ರ ಬಳಿಕ ನಿಮ್ಮ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ: ಸೋಮಣ್ಣ

12:31 AM Dec 23, 2023 | Team Udayavani |

ಶಿರಾ(ತುಮಕೂರು): ತಾಲೂಕಿನ ಪಟ್ಟನಾಯಕನಹಳ್ಳಿಯ ಐತಿಹಾಸಿಕ ಸ್ಫಟಿಕಪುರಿ ಮಹಾಸಂಸ್ಥಾನ ಮಠದ ಬೆಂಗಳೂರಿನ ಶಾಖಾಮಠಕ್ಕೆ ಭೇಟಿ ನೀಡಿದ ಮಾಜಿ ಸಚಿವ ವಿ. ಸೋಮಣ್ಣ ಅವರು ಪೀಠಾಧ್ಯಕ್ಷರಾದ ನಂಜಾವಧೂತ ಸ್ವಾಮೀಜಿಯವರ ಆಶೀರ್ವಾದ ಪಡೆದರು.

Advertisement

ಈ ವೇಳೆ ಮಾತನಾಡಿದ ಸೋಮಣ್ಣ, ರಾಜ್ಯದ ಜನ ನನ್ನ ಮೇಲಿಟ್ಟಿದ್ದ ನಂಬಿಕೆಗೆ ತಕ್ಕಂತೆ ಜನಸೇವೆ ಮಾಡಿದ್ದೇನೆ. ಚುನಾವಣೆಯಲ್ಲಿ ಸೋಲಾಗಿರಬಹುದು. ಆದರೆ ಜನರ ಹೃದಯದಲ್ಲಿ ಸ್ಥಾನ ಪಡೆದಿದ್ದೇನೆ ಎಂದು ಹೇಳಿದರು.

ಮೌನಕ್ಕೆ ಶರಣು
ಕಾಂಗ್ರೆಸ್‌ ಸೇರುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನೊಣವಿನಕೆರೆ ಅಜ್ಜಯ್ಯನವರ ಆಶೀ ರ್ವಾದದಂತೆ ಮೌನಕ್ಕೆ ಶರಣಾಗಿ ದ್ದೇನೆ. ಜ.6ರ ಬಳಿಕ ನಿಮ್ಮ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ ಎಂದು ಹೇಳಿದರು. ನಂಜಾವಧೂತ ಶ್ರೀಗಳಿಗಿರುವ ರೈತ ಮತ್ತು ನೀರಾವರಿ ಬಗ್ಗೆ ಕಾಳಜಿ ಮೆಚ್ಚುವಂಥದ್ದು, ರಾಜಕೀಯ ಮಾರ್ಗದರ್ಶನದ ಬಗ್ಗೆ ಶ್ರೀಗಳೊಂದಿಗೆ ಚರ್ಚಿಸಿದ್ದು, ಶ್ರೀಗಳ ಆಶೀರ್ವಾದದ ಮಾತು ಮನಸ್ಸಿಗೆ ನೆಮ್ಮದಿ ನೀಡಿದೆ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next