Advertisement

ಡಿಸ್ಚಾರ್ಜ್ ಹಂತದಲ್ಲಿದ್ದ ಯುವ ಅಧಿಕಾರಿ ಕೋವಿಡ್ ನಿಂದ ಸಾವು

06:56 PM May 17, 2021 | Team Udayavani |

ಬೀದರ : ಇಲ್ಲಿನ ಭೂ ಕಂದಾಯ ವಿಭಾಗದ ಸಹಾಯಕ ನಿರ್ದೇಶಕರಾಗಿದ್ದ 32 ವರ್ಷದ ಅಧಿಕಾರಿ ರವಿಕುಮಾರ ಕೋವಿಡ್ ಗೆ ಬಲಿಯಾಗಿದ್ದಾರೆ.

Advertisement

ಚಿಕಿತ್ಸೆಯಿಂದ ಪೂರ್ಣ ಗುಣಮುಖರಾಗಿ ಡಿಸ್ಚಾರ್ಜ್ ಹಂತಕ್ಕೆ ಬಂದ ವೇಳೆ ದಿಢೀರ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಯುವ ಅಧಿಕಾರಿ ಸಾವನ್ನಪ್ಪಿದ್ದಾರೆ.

ಮೂಲತಃ ಮೈಸೂರಿನವರಾಗಿರುವ ರವಿಕುಮಾರ ಕಳೆದ ನಾಲ್ಕು ವರ್ಷಗಳಿಂದ ಇಲ್ಲಿನ ಡಿಸಿ ಕಚೇರಿಯ ಭೂ ಕಂದಾಯ ವಿಭಾಗದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು.

ಕೋವಿಡ್ ಸೋಂಕು ಹಿನ್ನಲೆ ಒಂದು ವಾರದಿಂದ ಬ್ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜಿಲ್ಲಾಧಿಕಾರಿಗಳು ರವಿಕುಮಾರ ಅವರ ಸೂಕ್ತ ಚಿಕಿತ್ಸೆಗಾಗಿ ವಿಶೇಷ ಕಾಳಜಿ ವಹಿಸಿದ್ದರಾದರೂ ಯಾವುದೇ ಫಲ ನೀಡಲಿಲ್ಲ.

ಕೊರೊನಾದಿಂದ ಚೇತರಿಸಿಕೊಂಡಿದ್ದರಿಂದ ಅವರ ಆಕ್ಸಿಜನ್ ಸಹ ತೆಗೆಯಲಾಗಿತ್ತು. ಆದರೆ, ರವಿವಾರ ಬೆಳಗ್ಗೆ ಅವರ ಆರೋಗ್ಯದಲ್ಲಿ ಬದಲಾವಣೆ ಆಗಿದ್ದು, ಮೆದುಳಿನಲ್ಲಿ ರಕ್ತ ಕ್ಲಾಟ್(ಬ್ರೇನ್ ಬ್ಲಡ್ ಕ್ಲಾಟ್) ಆಗಿ ಕೋಮಾಗೆ ಜಾರಿದ್ದರು. ವೈದ್ಯ ಸಿಬ್ಬಂದಿ ಸಾಕಷ್ಟು ಪ್ರಯತ್ನ ಪಟ್ಟರು ಚಿಕಿತ್ಸೆ ಫಲಿಸದೇ ರಾತ್ರಿ ಕೊನೆಯುಸಿರೆಳೆದ್ದಾರೆ. ಮೃತ ರವಿಕುಮಾರ ಅವರ ಮೃತದೇಹವನ್ನು ಅಂಬುಲೆನ್ಸ್ ಮೂಲಕ ಮೈಸೂರಿಗೆ ರವಾನಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next