Advertisement

ಕಾಂಗ್ರೆಸ್‌ ಅತೃಪ್ತರ ವಿರುದ್ಧ ಯುವ ಶಾಸಕರ ಸಭೆ ನಾಳೆ

06:45 AM Jun 10, 2018 | |

ಬೆಂಗಳೂರು: ಸಚಿವ ಸ್ಥಾನಕ್ಕಾಗಿ ಪಟ್ಟು ಹಿಡಿದು ಅಸಮಾಧಾನಗೊಂಡಿರುವ ಶಾಸಕರ ಬಗ್ಗೆ ಕಿಡಿ ಕಾರಿರುವ
ಕಾಂಗ್ರೆಸ್‌ ಶಾಸಕ ಬೈರತಿ ಬಸವರಾಜು, ಸೋಮವಾರ 40ಕ್ಕೂ ಹೆಚ್ಚು ಯುವ ಶಾಸಕರು (ಒಂದು ಅಥವಾ ಎರಡು
ಬಾರಿ ಗೆದ್ದವರು) ಸಭೆ ಸೇರಿ ಅತೃಪ್ತರಿಗೆ ಸ್ಪಷ್ಟ ಸಂದೇಶ ರವಾನಿಸುವುದಾಗಿ ಹೇಳಿದ್ದಾರೆ. 

Advertisement

ವಿಧಾನಸೌಧದಲ್ಲಿ ಶನಿವಾರ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ನಡೆಸಿದ ಬೆಂಗಳೂರು ಅಭಿವೃದ್ಧಿ ಕುರಿತ ಸಭೆಯಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಮಂತ್ರಿ ಸ್ಥಾನ ಸಿಗಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುವುದು ಅಥವಾ ಅತೃಪ್ತಿ ತೋರಿಸುವುದು ಸರಿಯಲ್ಲ. ಅತೃಪ್ತ ಶಾಸಕರ ಹಿಂದೆ ಬೇರೆ ಯಾವ ಶಾಸಕರೂ ಇಲ್ಲ. ಗೆದ್ದವರು ಯಾರೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಹೇಳಿದರು.

ಸಚಿವ ಸ್ಥಾನಕ್ಕಾಗಿ ಕಚ್ಚಾಡುವುದು ಸರಿಯಲ್ಲ. ಈ ವಿಚಾರದಲ್ಲಿ ಪಕ್ಷ ತೆಗೆದುಕೊಳ್ಳುವ ತೀರ್ಮಾ ನಕ್ಕೆ ಎಲ್ಲರೂ ಬದ್ಧ
ರಾಗಿರಬೇಕು. ಈ ಹಿನ್ನೆಲೆಯಲ್ಲಿ ಸೋಮವಾರ 40ಕ್ಕೂ ಹೆಚ್ಚು ಶಾಸಕರು ಸಭೆ ಸೇರಿ ಸಚಿವ ಸ್ಥಾನಕ್ಕೆ ಕಚ್ಚಾಡುವವರಿಗೆ ಸ್ಪಷ್ಟ ಸಂದೇಶ ನೀಡಲಿದ್ದು, ಆ ಸಂದೇಶ ಯಾವುದು ಎಂಬುದು ಆ ದಿನವೇ ಗೊತ್ತಾಗಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next