Advertisement

ಮದುವೆ ಮಾಡುವುದು ತಡವಾದ್ದರಿಂದ ಮೊಬೈಲ್ ಟವರ್ ಕಂಬ ಏರಿ ಕುಳಿತ ಯುವಕ

06:03 PM Jun 14, 2021 | Team Udayavani |

ಬಳ್ಳಾರಿ: ಹುಡುಗಿ ಫಿಕ್ಸ್ ಮಾಡಿದ ಮೇಲೆ ಮದುವೆ ಮಾಡೋದ್ಯಾಕೆ ತಡವೆಂದು ಯುವಕನೊಬ್ಬ ಮೊಬೈಲ್ ಟವರ್ ಏರಿ ಕುಳಿತಿತುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕು ಮರಿಯಮ್ಮನಹಳ್ಳಿಯಲ್ಲಿ ಸೋಮವಾರ ನಡೆದಿದೆ.
ಚಿರಂಜೀವಿ (23) ಟವರ್ ಏರಿ ಕುಳಿತ ಯುವಕ.

Advertisement

ಈಗಾಗಲೇ ಮದುವೆಗೆಂದು ಹುಡುಗಿ ಫಿಕ್ಸ್ ಮಾಡಿ ಪೋಷಕರು ಮಾತುಕತೆ ಮಾಡಿ ಮುಗಿಸಿದ್ದಾರೆ. ಪೋಷಕರಿಗೆ ಇಬ್ಬರು ಗಂಡು ಮಕ್ಕಳು ಇರೋ ಕಾರಣಕ್ಕೆ ಚಿರಂಜೀವಿಗಿಂತ ದೊಡ್ಡ ಹುಡುಗನ ಮದುವೆ ಆಗಲಿ ಎಂದು ಪೋಷಕರು ಚಿರಂಜೀವಿ ಮದುವೆ ಮಾಡುವುದನ್ನು ತಡ ಮಾಡಿದ್ದಾರೆ.

ಆದರೆ, ಪೋಷಕರ ಮಾತನ್ನು ಕೇಳದ ಚಿರಂಜೀವಿ, ನನಗೆ ಹುಡುಗಿ ಫಿಕ್ಸ್ ಮಾಡಿದ್ದೀರಿ. ಆದರೆ, ಮದುವೆ ಮಾಡುವುದನ್ನು ಏಕೆ ತಡ ಮಾಡುತ್ತಿದ್ದೀರಿ. ನನಗೆ ಮದುವೆ ಬೇಕು ಅಂತ ಈ ಹಿಂದೆಯೂ ಹಠ ಮಾಡಿದ್ದನಂತೆ. ಇದೀಗ ಪುನಃ ಮದುವೆ ಮಾಡುವಂತೆ ಹಠಕ್ಕೆ ಬಿದ್ದಿರುವ ಚಿರಂಜೀವಿ ಟವರ್ ಏರಿ ದುಃಸ್ಸಾಹಸಕ್ಕೆ ಕೈಹಾಕಿದ್ದಾನೆ.

ಸ್ಥಳಕ್ಕೆ ಆಗಮಿಸಿದ ಮರಿಯಮ್ಮನಹಳ್ಳಿ ಪೊಲೀಸರು ಕೊನೆಗೂ ಹರಸಾಹಸ ಮಾಡಿ, ಮನವೊಲಿಸಿ ಯುವಕನಮ್ನು ಟವರ್ ನಿಂದ ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಾನು ಇಳಿದ ಮೇಲೆ ನನಗ್ಯಾರು ಹೊಡಿಬಾರದು ಅಂತ ಷರತ್ತು ಹಾಕಿ ಯುವಕ ಚಿರಂಜೀವಿ ಟವರ್ ನಿಂದ ಕೆಳಗೆ ಇಳಿದಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next