Advertisement

ಕನ್ಯಾನ : ಕಂಠಪೂರ್ತಿ ಕುಡಿದ ಚಾಲಕ; ಜೆಸಿಬಿ-ಸೈಕಲಿಗೆ ಢಿಕ್ಕಿ, ಬಾಲಕ ಸಾವು

07:10 PM Jun 05, 2022 | Team Udayavani |

ವಿಟ್ಲ: ಕನ್ಯಾನ ಗ್ರಾಮದ ಕಣಿಯೂರು ಎಂಬಲ್ಲಿನ ಉದ್ಯಮಿಯ ಮನೆಗೆ ಕೆಲಸಕ್ಕೆಂದು ಬರುತ್ತಿದ್ದ ಜೆಸಿಬಿಯು ಸೈಕಲ್ ಗೆ ಢಿಕ್ಕಿ ಹೊಡೆದಿದ್ದು, ಚಲಾಯಿಸುತ್ತಿದ್ದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.

Advertisement

ಮೃತಪಟ್ಟ ಬಾಲಕನನ್ನು ಕಣಿಯೂರು ನಿವಾಸಿ ಹಸೈನಾರ್ ಅವರ ಪುತ್ರ ಮಹಮ್ಮದ್ ಅಖಿಲ್ ಎಂದು ತಿಳಿದು ಬಂದಿದೆ.

ಜೆಸಿಬಿ ಚಲಾಯಿಸುತ್ತಿದ್ದ ವ್ಯಕ್ತಿ ಕಂಠಪೂರ್ತಿ ಕುಡಿದಿದ್ದ ಎನ್ನಲಾಗಿದೆ.

ಇದನ್ನೂ ಓದಿ: ಪೆರ್ಲಂಪಾಡಿ : ಚರಣ್ ರಾಜ್ ರೈ ಕೊಲೆ ಪ್ರಕರಣ : ಮೂವರು ಪೊಲೀಸರ ವಶಕ್ಕೆ

ಅಮಲು ಪದಾರ್ಥ ಸೇವಿಸಿದ್ದ ಗದಗ ಮೂಲದ ಚಾಲಕ ತನ್ನ ನಿರ್ಲಕ್ಷ್ಯದ ಚಲಾವಣೆಯಿಂದ ಜೆಸಿಬಿಯು ಬಾಲಕನ ಮೇಲೆರಗಿದೆ. ಸ್ಥಳದಲ್ಲೇ ಸಾವನ್ನಪ್ಪಿದ ಬಾಲಕನನ್ನು ಜೆಸಿಬಿಯಿಂದ ಪಕ್ಕಕ್ಕೆ ಸರಿಸಿ, ತಾನು ಕೆಲಸದ ಜಾಗಕ್ಕೆ ತೆರಳಿದ್ದಾನೆ. ಅಲ್ಲಿ ಆತ ಬೇರೊಬ್ಬ ಚಾಲಕ ಬರುತ್ತಾನೆಂದು ಹೇಳಿ ಪರಾರಿಯಾಗಲು ಯತ್ನಿಸುತ್ತಿದ್ದಾಗ ವಿಷಯ ಊರಿನವರಿಗೆ ತಿಳಿದು ಬಂದಿದೆ. ಉದ್ಯಮಿ ಹಾಗೂ ಊರವರು ಒಟ್ಟು ಸೇರಿ ಚಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

Advertisement

ಸ್ಥಳೀಯರು ವಿಟ್ಲ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಸಾದಿಕ್ ಹಾಗೂ ಜೆಸಿಬಿಯನ್ನು ವಶಕ್ಕೆ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next