Advertisement

ಭಾರತೀಯ ಚಿತ್ರರಂಗದಲ್ಲಿ ಇಂತಹದ್ದನ್ನು ನೀವು ನೋಡಿರಲಿಕ್ಕಿಲ್ಲ; ಕಾಂತಾರ ಬಗ್ಗೆ ರಕ್ಷಿತ್ ಮಾತು

10:25 AM Sep 30, 2022 | Team Udayavani |

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ‘ಕಾಂತಾರ’ ಚಿತ್ರ ಇಂದು ತೆರೆಗಪ್ಪಳಿಸಿದೆ. ಹಲವು ದೊಡ್ಡ ಚಿತ್ರಗಳ ನಡುವೆ ತೆರೆಕಂಡರೂ ಕಾಂತಾರ ಸಖತ್ ಸದ್ದು ಮಾಡುತ್ತಿದೆ. ಚಿತ್ರತಂಡವು ಗುರುವಾರ ಸಂಜೆ ಹಲವೆಡೆ ಪ್ರೀಮಿಯರ್ ಶೋಗಳನ್ನು ಆಯೋಜಿಸಿದ್ದು, ಸಿನಿಮಾ ನೋಡಿದ ಜನರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Advertisement

ಕಾಂತಾರ ಚಿತ್ರವನ್ನು ರಿಷಬ್ ಶೆಟ್ಟಿ ನಿರ್ದೇಶನ ಮಾಡಿದ್ದು, ಹೊಂಬಾಳೆ ಫಿಲಂಸ್ ನಡಿ ವಿಜಯ್ ಕಿರಗಂದೂರು ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ರಿಷಬ್, ಕಿಶೋರ್, ಸಪ್ತಮಿ ಗೌಡ, ಅಚ್ಯುತ್ ಕುಮಾರ್ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ:ಗಾಯಗೊಂಡ ಜಸ್ಪ್ರೀತ್ ಬುಮ್ರಾ ಬದಲಿಗೆ ವೇಗಿಯನ್ನು ನೇಮಿಸಿದ ಬಿಸಿಸಿಐ

ಚಿತ್ರ ನೋಡಿದ ನಟ ರಕ್ಷಿತ್ ಶೆಟ್ಟಿ ಟ್ವೀಟ್ ಮಾಡಿದ್ದು, “ಕಾಂತಾರ… ಕೊನೆಯ 20 ನಿಮಿಷಗಳು ನಿಮ್ಮ ಉಸಿರನ್ನು ಹಿಡಿದಿಟ್ಟು ಕೊಳ್ಳುತ್ತಾನೆ. ರಿಷಬ್ ಅತ್ಯುತ್ತಮ ನಟನೆ ಅಥವಾ ಗುಳಿಗ (ದೈವ) ಅವನಲ್ಲಿಯೇ ಆವಾಹನೆ ಹೊಂದಿದ್ದಾನೆ ಎಂದು ಹೇಳಬೇಕೇನೋ? ಭಾರತೀಯ ಚಿತ್ರರಂಗದಲ್ಲಿ ಇಂತಹದ್ದನ್ನು ನೀವು ನೋಡಿರಲಿಕ್ಕಿಲ್ಲ.. ಕ್ಲೈಮ್ಯಾಕ್ಸ್‌ ನನ್ನಲ್ಲಿ ಆವರಿಸಿದೆ ಎಂದರೆ ನನಗೆ ಅದನ್ನು ಹೇಳಲು ಸಾಧ್ಯವಿಲ್ಲ. ಉಡುಪಿಗೆ ಕೂಡಲೇ ಹೋಗಿ ದೈವ ಸಾನಿಧ್ಯಕ್ಕೆ ಭೇಟಿ ನೀಡಬೇಕಿದೆ” ಎಂದು ಬರೆದುಕೊಂಡಿದ್ದಾರೆ.

Advertisement

ಬಹುಭಾಷಾ ಸಿನಿಮಾ ಟ್ರೇಡ್ ಅನಲಿಸ್ಟ್ ರಮೇಶ್ ಬಾಲಾ ಅವರು ಚಿತ್ರ ನೋಡಿದ್ದು, ‘ಇದೊಂದು ವಿಶಿಷ್ಟ ಅನುಭವ. ಮನುಷ್ಯನ ದುರಾಸೆ vs ಪ್ರಕೃತಿ.. ಎಂತಹ ಪವರ್‌ಫುಲ್ ಕ್ಲೈಮ್ಯಾಕ್ಸ್! ರಿಷಬ್ ಶೆಟ್ಟಿ ಅವರದ್ದು ಬಹಳ ಕನ್ವಿಕ್ಷನ್‌ನೊಂದಿಗೆ ಉತ್ತಮ ಅಭಿನಯ. ಅಲ್ಲದೆ ಅದ್ಭುತ ಬರವಣಿಗೆ ಮತ್ತು ನಿರ್ದೇಶನ.” ಎಂದು ಬರೆದುಕೊಂಡಿದ್ದಾರೆ.

ತಮಿಳು ನಿರ್ಮಾಪಕ ಎಸ್.ಆರ್ ಬಾಬು ಅವರು ಟ್ವೀಟ್ ಮಾಡಿದ್ದು, “ಕಾಂತಾರವು ಹೊಸ ಕನ್ನಡ ಅಲೆಯಲ್ಲಿ ಬಂದ ಮತ್ತೊಂದು ಉತ್ತಮ ಚಿತ್ರ! ಬರವಣಿಗೆ, ಮೇಕಿಂಗ್ ಮತ್ತು ಮೂಲ ಮಣ್ಣಿನ ಕಥೆ..! ಹಲವು ರೋಮಾಂಚನಕಾರಿ ಕ್ಷಣಗಳೊಂದಿಗೆ ಎಲ್ಲವೂ ಉತ್ತಮವಾಗಿ ಕಾರ್ಯನಿರ್ವಹಿಸಿದೆ” ಎಂದು ಬರೆದುಕೊಂಡಿದ್ದಾರೆ.

ಇನ್ನು ಹಲವು ಟ್ವೀಟ್ ಗಳು ಇಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next