Advertisement

ದಾನ, ಧರ್ಮ, ಜನಸೇವೆಯಿಂದಲೂ ದೇವರನ್ನು ಕಾಣಬಹುದು

07:00 AM Aug 27, 2017 | Team Udayavani |

ವೇಣೂರು: ಕೇವಲ ಕಲ್ಲಿನ ಮೂರ್ತಿಗಳಲ್ಲಿ ದೇವರಿದ್ದಾನೆ ಎಂಬ ನಂಬಿಕೆ ದೂರವಾಗಬೇಕು. ದಾನ, ಧರ್ಮ ಹಾಗೂ ಜನಸೇವೆಯಲ್ಲಿ ದೇವರನ್ನು ಕಾಣಬಹುದು. ದೇವಸ್ಥಾನಗಳು, ಮಠ, ಮಂದಿರಗಳು ಧರ್ಮ ಪ್ರಭಾವನೆಯ ಕೇಂದ್ರಗಳಾಗಬೇಕು ಎಂದು ಪೊಳಲಿ ಶ್ರೀರಾಮಕೃಷ್ಣ ತಪೋàವನದ ಅಧ್ಯಕ್ಷ  ವಿವೇಕ ಚೈತನ್ಯಾನಂದ ಸ್ವಾಮೀಜಿ ಹೇಳಿದರು.

Advertisement

ಅವರು ವೇಣೂರು ಫಲ್ಗುಣಿ ಸೇವಾ ಸಂಘದ ಆಶ್ರಯದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋಜನೆ ವೇಣೂರು ವಲಯದ ಆಶ್ರಯದಲ್ಲಿ ವೇಣೂರು ಮುಖ್ಯಪೇಟೆಯಲ್ಲಿ ಶುಕ್ರವಾರ ಜರಗಿದ 17ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. 

ಸಮಾರಂಭದ ಅಧ್ಯಕ್ಷತೆಯನ್ನು ಮೂಡಬಿದಿರೆ ಎಕ್ಸಲೆಂಟ್‌ ಪ.ಪೂ.ಕಾಲೇಜಿನ ಅಧ್ಯಕ್ಷ ಯುವರಾಜ ಜೈನ್‌ ವ‌ಹಿಸಿದ್ದರು. ಫಲ್ಗುಣಿ ಸೇವಾ ಸಂಘದ ಅಧ್ಯಕ್ಷ ಪಿ. ಪ್ರಸನ್ನ ಹೆಬ್ಟಾರ್‌ ಉಪಸ್ಥಿತರಿದ್ದರು.

ಸಮ್ಮಾನ
ವೇಣೂರು ಸರಕಾರಿ ಪ್ರೌಢಶಾಲೆಯಲ್ಲಿ ಸುಮಾರು 35 ವರ್ಷಗಳ ಕಾಲ ದೆ„ಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿಗೊಂಡಿರುವ ನವೀನ್‌ ಕುಮಾರ್‌ ಜೈನ್‌ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು.ವೈಭವೋಪೇತ ಮೆರವಣಿಗೆಯೊಂದಿಗೆ ಫಲ್ಗುಣಿ ನದಿಯಲ್ಲಿ ಗಣಪನ ವಿಗ್ರಹ ವಿಸರ್ಜಿಸಲಾಯಿತು. ಎಸ್‌. ರಾಮ ಉಪಾಧ್ಯಾಯ ಮತ್ತು ಮಕ್ಕಳು ಪೂಜಾ ವಿಧಿವಿಧಾನ ನಡೆಸಿಕೊಟ್ಟರು.

ಫಲ್ಗುಣಿ ಸೇವಾ ಸಂಘದ ಸ್ಥಾಪಕಾಧ್ಯಕ್ಷ ವಿ.ಎಸ್‌. ಜಯರಾಜ್‌, ಪ್ರ. ಕಾರ್ಯದರ್ಶಿ ಕೆ. ಪ್ರಶಾಂತ್‌ ಹೆಗ್ಡೆ, ಗಣೇಶೋತ್ಸವ ಸಮಿತಿ ಕಾರ್ಯದರ್ಶಿ ಪ್ರವೀಣ್‌ ಭಂಡಾರಿ, ಪದಾಧಿಕಾರಿಗಳು ಸಹಕರಿಸಿದರು.ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಶೀನ ದೇವಾಡಿಗ ಸ್ವಾಗತಿಸಿ ಕೋಶಾಧಿಕಾರಿ ಜಗದೀಶ್ಚಂದ್ರ ಡಿ.ಕೆ. ವಂದಿಸಿ ಉಪನ್ಯಾಸಕ ಪದ್ಮಪ್ರಸಾದ ಜೈನ್‌,ಜಗನ್ನಾಥ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.

Advertisement

ವಿದ್ಯಾರ್ಥಿವೇತನ ವಿತರಣೆ
ಫಲ್ಗುಣಿ ಸೇವಾ ಸಂಘದ ವತಿಯಿಂದ ದಿ| ಕೆ.ಎನ್‌. ಪೈ ಸ್ಮರಣಾರ್ಥ, ದಿ| ಎರ್ಮೋಡಿ ಗುಣಪಾಲ ಜೈನ್‌ ಸ್ಮರಣಾರ್ಥ ಹಾಗೂ ದಿ| ಸುಮಿತ್ರಾ ಜಯರಾಜ್‌ ಸ್ಮರಣಾರ್ಥ ಕಳೆದ ಶೆ„ಕ್ಷಣಿಕ ಸಾಲಿನಲ್ಲಿ ಸಾಧನೆಗೆ„ದ ಪ್ರಜ್ಞಾ ಪ್ರಭು, ಅನ್ನಪೂರ್ಣ ಎಸ್‌. ಹಾಗೂ ಸಂಗೀತಾ ಅವರಿಗೆ ವಿದ್ಯಾರ್ಥಿ ವೇತನ ವಿತರಣೆ ಮಾಡಲಾಯಿತು. 

ಮತಾಂತರ
ಕಡಿವಾಣ ಸಾಧ್ಯ

ಹಿಂದೂಗಳಲ್ಲಿ ಒಗ್ಗಟ್ಟಿನ ಕೊರತೆ ಇದೆ. ಹಿಂದೂ ಸಮಾಜ ಸಂಘಟಿತರಾಗಬೇಕು. ಜತೆಗೆ ಸೇವಾಮನೋಭಾವ ಬೆಳೆಸಿಕೊಳ್ಳಬೇಕು. ಸಂಘ ಸಂಸ್ಥೆಗಳಿಂದ ಜನಸೇವೆ ನಡೆದರೆ ಮತಾಂತರಕ್ಕೆ ಕಡಿವಾಣ ಹಾಕಲು ಅಸಾಧ್ಯ.
– ವಿವೇಕ ಚೆ„ತನ್ಯಾನಂದ ಸ್ವಾಮೀಜಿ, ಶ್ರೀರಾಮಕೃಷ್ಣ  ತಪೋವನ, ಪೊಳಲಿ

Advertisement

Udayavani is now on Telegram. Click here to join our channel and stay updated with the latest news.

Next