Advertisement

ಯೋಗೀಶ ಗೌಡ ಹತ್ಯೆ 7ರವರೆಗೆ ಸಿಬಿಐ ವಶಕ್ಕೆ

10:54 PM Mar 02, 2020 | Lakshmi GovindaRaj |

ಧಾರವಾಡ: ಹೆಬ್ಬಳ್ಳಿ ಜಿಪಂ ಸದಸ್ಯರಾಗಿದ್ದ ಬಿಜೆಪಿಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಬಂಧಿಸಿರುವ ಆರು ಜನ ಸುಪಾರಿ ಹಂತಕರನ್ನು ಮಾ. 7ರವರೆಗೆ ಸಿಬಿಐ ವಶಕ್ಕೆ ನೀಡಲಾಗಿದೆ. ಸಿಬಿಐ ಅಧಿಕಾರಿಗಳ ತಂಡ ಆರು ಜನರನ್ನು ಸೋಮವಾರ ಪ್ರಧಾನ ಜೆಎಂಎಫ್‌ ನ್ಯಾಯಾಲಯದ ನ್ಯಾಯಾ ಧೀಶರಾದ ವಿಜಯಲಕ್ಷ್ಮೀ ಘಾನಾಪುರ ಅವರ ಎದುರು ಹಾಜರು ಪಡಿಸಿದರು.

Advertisement

ಈ ವೇಳೆ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ಸಿಬಿಐ ವಶಕ್ಕೆ ನೀಡುವಂತೆ ಕೋರಲಾಯಿತು. ಈ ಹಿನ್ನೆಲೆಯಲ್ಲಿ ಆರು ಆರೋಪಿಗಳನ್ನು ನ್ಯಾಯಾಧೀಶರಾದ ವಿಜಯಲಕ್ಷ್ಮೀ ಘಾನಾ ಪುರ ಅವರು ಮಾ.7ರವರೆಗೆ ಸಿಬಿಐ ಅಧಿಕಾರಿಗಳ ವಶಕ್ಕೆ ನೀಡಿ ಆದೇಶ ಹೊರಡಿಸಿದರು. ಆರೋಪಿಗಳಾದ ದಿನೇಶ, ಅಶ್ವಥ್‌, ಶಾ ನವಾಜ್‌, ಸುನೀಲ್‌ ಕುಮಾರ್‌, ನಜೀರ್‌ ಅಹ್ಮದ್‌, ನೂತನ್‌ ಅವರನ್ನು ವಶಕ್ಕೆ ಪಡೆದು ಆರು ದಿನಗಳ ಕಾಲ ಅಜ್ಞಾತ ಸ್ಥಳದಲ್ಲಿರಿಸಿ ಸಿಬಿಐ ವಿಚಾರಣೆ ನಡೆಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next