Advertisement

ವಚನಾನಂದ ಸ್ವಾಮೀಜಿಗಳಿಂದ ಸಾರ್ವಜನಿಕರಿಗೆ ಯೋಗಾಭ್ಯಾಸ

12:38 PM Jun 18, 2017 | Team Udayavani |

ದಾವಣಗೆರೆ: ಜಿಲ್ಲಾ ಆಯುಷ್‌ ಇಲಾಖೆ, ಜಿಲ್ಲಾ ಯೋಗ ಒಕ್ಕೂಟದಿಂದ 3ನೇ ವಿಶ್ವ ಯೋಗ ದಿನಾಚರಣೆ ನಿಮಿತ್ತ ಶನಿವಾರ ಆಯೋಜಿಸಿದ್ದ ಯೋಗ ನಡಿಗೆ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು. ಮೋತಿ ವೀರಪ್ಪ ಕಾಲೇಜು ಆವರಣದಲ್ಲಿ ಜಮಾಯಿಸಿದ ಸಾರ್ವಜನಿಕರು, ಅಲ್ಲಿ ಯೋಗಾಭ್ಯಾಸ ಮಾಡಿ, ನಡಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. 

Advertisement

ಶಾಲಾ ಕಾಲೇಜು ವಿದ್ಯಾರ್ಥಿಗಳು, ಯೋಗಾಸಕ್ತರು ಹಾಗೂ ಸಾರ್ವಜನಿಕರಿಗೆ ಶ್ವಾಸ ಗುರು ವಚನಾನಂದ ಸ್ವಾಮೀಜಿ ಯೋಗ ಅಭ್ಯಾಸ ತಿಳಿಸಿಕೊಟ್ಟರು. ಯೋಗದ ಮಹತ್ವ ಸಾರುವ ಉದ್ದೇಶದಿಂದ ಹಮ್ಮಿಕೊಂಡ ನಡಿಗೆ ಜಯದೇವ ಸರ್ಕಲ್‌, ಮಹಾನಗರ ಪಾಲಿಕೆ, ಹರಳೆಣ್ಣೆ ಕೊಟ್ರಬಸಪ್ಪ ವೃತ್ತದ ಮುಖಾಂತರ ಮತ್ತೆ ವಾಪಸ್‌ ಮೋತಿ ವೀರಪ್ಪ ಕಾಲೇಜು ತಲುಪಿತು. 

ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಉಮಾ. ಎಂ.ಪಿ. ರಮೇಶ್‌, ಜಿಲ್ಲಾ ಧಿಕಾರಿ ಡಿ.ಎಸ್‌.ರಮೇಶ್‌, ಜಿಲ್ಲಾ ಪೊಲೀಸ್‌ ವರಿಷ್ಠಾ ಧಿಕಾರಿ ಡಾ| ಭೀಮಾಶಂಕರ್‌ ಗುಳೇದ್‌, ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿ ಕಾರಿ ಎಸ್‌. ಅಶ್ವತಿ, ಮೇಯರ್‌ ಅನಿತಾಬಾಯಿ, ಉಪ ಮೇಯರ್‌ ಮಂಜಮ್ಮ, ಸದಸ್ಯೆ ಅಶ್ವಿ‌ನಿ ಪ್ರಶಾಂತ್‌,

-ಜಿಲ್ಲಾ ಆಯುಷ್‌ ಅಧಿಕಾರಿ ಡಾ| ಯು.ಸಿದ್ದೇಶ್‌, ಜಿಲ್ಲಾ ಯೋಗ ಒಕ್ಕೂಟದ ಅಧ್ಯಕ್ಷ ಬಿ.ಸಿ. ಉಮಾಪತಿ, ಪ್ರಧಾನ ಕಾರ್ಯದರ್ಶಿ ವಾಸುದೇವ ರಾಯ್ಕರ್‌, ಡಿಡಿಪಿಐ ಎಚ್‌.ಎಂ. ಪ್ರೇಮ, ಮಂಜುನಾಥ, ಪ್ರಕಾಶ್‌ ಉತ್ತಂಗಿ, ರಾಜು ಬದ್ದಿ, ಅನಿಲ್‌ ರಾಯ್ಕರ್‌, ತೀರ್ಥರಾಜ್‌, ಸುನಿಲ್‌ ಇತರರು ನಡಿಗೆಯ ಮುಂದಾಳತ್ವ ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next