Advertisement

ಸಂಸತ್ತಿಗೆ ಯಾರನ್ನು ಕಳಿಸಬೇಕು ? ದೇಶ ರಕ್ಷಕರನ್ನೋ, ಶತ್ರುಗಳನ್ನೋ : ರಾಮ್‌ ದೇವ್‌ ಪ್ರಶ್ನೆ

12:49 PM Apr 18, 2019 | Sathish malya |

ಹೊಸದಿಲ್ಲಿ : ‘ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಯಾರನ್ನು ಸಂಸತ್ತಿಗೆ ಕಳುಹಿಸಬೇಕು ? ದೇಶ ರಕ್ಷಕರನ್ನೋ ಅಥವಾ ದೇಶದ ಶತ್ರುಗಳನ್ನೋ ? ಎಂಬುದನ್ನು ಮತದಾರರು ತೀರ್ಮಾನಿಸಬೇಕಾಗಿದೆ’ ಎಂದು ಯೋಗ ಗುರು ಬಾಬಾ ರಾಮದೇವ್‌ ಹೇಳಿದ್ದಾರೆ.

Advertisement

ಪ್ರಧಾನಿ ನರೇಂದ್ರ ಮೋದಿ ಅವರಿಗೆ ತನ್ನ ಬೆಂಬಲವನ್ನು ವ್ಯಕ್ತಪಡಿಸಿದ ರಾಮದೇವ್‌, ದೇಶವು ಈ ಬಿಜೆಪಿ ನಾಯಕನ ಕೈಯಲ್ಲಿ ಸುರಕ್ಷಿತವಾಗಿದೆ ಎಂದು ಹೇಳಿದರು.

‘ಈ ಬಾರಿಯ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮತದಾರರು ಸರಿ ಮತ್ತು ತಪ್ಪನ್ನು ಆಯ್ಕೆ ಮಾಡಬೇಕಾಗಿದೆ. ಕಳೆದ ಐದು ವರ್ಷಗಳ ಆಡಳಿತೆಯಲ್ಲಿ ಪ್ರಧಾನಿ ಮೋದಿ ದೇಶದ ಅಭ್ಯುದಯಕ್ಕಾಗಿ ಹಲವಾರು ಸಾಧನೆಗಳನ್ನು ಮಾಡಿದ್ದಾರೆ. ಆದರೆ ವಿಪಕ್ಷಗಳ ಬಳಿ ದೇಶಕ್ಕೆ ಮತ್ತು ಜನರಿಗೆ ಒಳಿತಾಗುವ ಯಾವುದೇ ದೃಢ ಯೋಜನೆಗಳಿಲ್ಲ’ ಎಂದು ರಾಮ್‌ ದೇವ್‌ ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next