Advertisement
ಅವರು ಜೂ.21ರಂದು ಬನಹಟ್ಟಿಯ ಎಸ್ಆರ್ಎ ಮೈದಾನದಲ್ಲಿ ತೇರದಾಳ ಮತಕ್ಷೇತ್ರದ ಬಿಜೆಪಿ ವತಿಯಿಂದ ಆಜಾಧಿ ಕಾ ಅಮೃತಮಹೋತ್ಸವದ 8ನೇ ವಿಶ್ವ ಯೋಗಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
Related Articles
Advertisement
ಇಡೀ ವಿಶ್ವದ ಮನುಕುಲಕ್ಕೆ ಯೋಗ ವಿದ್ಯೆಯ ಮಹತ್ತ ಸಾರಿದ ದೇಶ ಭಾರತ. ರೋಗ ರಹಿತ ಮನುಕುಲದ ಮುಂದುವರಿಕೆಗೆ ಭಾರತದ ಯೋಗ ದಾನ ಬಹು ಮುಖ್ಯವಾಗಿದೆ. ಸದೃಢ ಮನಸ್ಸು ಹಾಗೂ ದೇಹ ಹೊಂದಬೇಕಾದರೆ ಯೋಗದಿಂದ ಮಾತ್ರ ಸಾಧ್ಯ ಎಂದು ನುಡಿದರು.
ಬನಹಟ್ಟಿ ಹಿರೇಮಠದ ಶರಣಬಸವ ಶಿವಾಚಾರ್ಯರು, ರಾಮಪೂರದ ಸಿದ್ರಾಮ ಶ್ರೀಗಳು, ಹೊಸೂರನ ಸಂಗಮೇಶ್ವರ ಶ್ರೀಗಳು ವೇದಿಕೆಯಲ್ಲಿದ್ದರು.
ಬನಹಟ್ಟಿ ಆರೋಗ್ಯ ಯೋಗಫೀಠ ಫೌಂಡೇಶನ್ನ ಡಾ. ಪರಶುರಾಮ ರಾವಳ ಹಾಗೂ ಯೋಗ ಗುರು ಹಾಗೂ ಹಳೆ ಹುಬ್ಬಳ್ಳಿ ವೀರಭಿಕ್ಷಾವರ್ತಿ ಮಠದ ಶ್ರೀ ಶಿವಶಂಕರ ಶಿವಾಚಾರ್ಯ ಶ್ರೀಗಳು ಯೋಗಾಸನ ತಿಳಿಸಿಕೊಟ್ಟರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಸಂಜಯ ಇಂಗಳೆ, ಬಿಜೆಪಿ ನಗರಘಟಕದ ಅಧ್ಯಕ್ಷ ಧರೆಪ್ಪ ಉಳ್ಳಾಗಡ್ಡಿ, ತಾ. ಪಂ. ಕಾರ್ಯನಿರ್ವಾಹಕ ಅಧಿಕಾರಿ ಸಂಜಯ ಹಿಪ್ಪರಗಿ, ಸಿಪಿಐ ಜೆ. ಕರಣೇಶಗೌಡ, ಶ್ರೀಶೈಲ ಬೀಳಗಿ, ಶಿವಾನಂದ ಗಾಯಕವಾಡ, ವಿನಾಯಕ ತಾಂಬಟ, ಮಹಾದೇವ ಕೋಟ್ಯಾಳ, ಕುಮಾರ ಕದಂ, ಬನಹಟ್ಟಿ ಪಿಎಸ್ಐ ಸುರೇಶ ಮಂಟೂರ, ಪೌರಾಯುಕ್ತ ಶ್ರೀನಿವಾಸ ಜಾಧವ, ಮಹಾಲಿಂಗಪುರ ಪಿಎಸ್ಐ ವಿಜಯ ಕಾಂಬಳೆ, ಪ್ರಭು ಪೂಜಾರಿ, ಪ್ರಭಾಕರ ಮೊಳೇದ, ಗೌರಿ ಮಿಳ್ಳಿ, ವೈಷ್ಣವಿ ಬಾಗೇವಾಡಿ, ಮೀನಾಕ್ಷಿ ಸವದಿ, ಸವಿತಾ ಹೊಸರ, ವಿದ್ಯಾ ಧಬಾಡಿ, ರಾಜೇಂದ್ರ ಅಂಬಲಿ, ಅರುಣ ಬುದ್ನಿ, ಪಿ. ಆರ್. ಮಠಪತಿ, ಸದಾಶಿವ ಪರೀಟ, ಶ್ರೀಶೈಲ ಗಸ್ತಿ ಸೇರಿದಂತೆ ಅನೇಕರು ಇದ್ದರು.