Advertisement

ಯೋಗದಿಂದ ರೋಗ ದೂರ

07:41 AM Jun 22, 2020 | Suhan S |

ಶಹಾಪುರ: ನಿತ್ಯ ಯೋಗಾಭ್ಯಾಸ ಮಾಡುವುದರಿಂದ ಮನುಷ್ಯ ರೋಗದಿಂದ ದೂರವಿರಲು ಸಾಧ್ಯ. ಮಾನಸಿಕ, ದೈಹಿಕ ಸದೃಢತೆಗೆ ನಿತ್ಯ ಯೋಗಾಭ್ಯಾಸ ಅಗತ್ಯ ಎಂದು ಬಿಎಸ್‌ಎಫ್‌ ಯೋಧ ದುರ್ಗಪ್ಪ ನಾಯಕ ಹೇಳಿದರು.

Advertisement

ಅಂತಾರಾಷ್ಟ್ರೀಯ ಯೋಗಾ ದಿನಾಚರಣೆ ಅಂಗವಾಗಿ ರವಿವಾರ ಇಲ್ಲಿನ ಗೆಳೆಯರ ಬಳಗದಿಂದ ನಡೆದ ಯೋಗಾಭ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರಸ್ತುತ ಒತ್ತಡದ ಬದುಕಿನಲ್ಲಿಮನುಷ್ಯ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾನೆ. ಒತ್ತಡ ನಿವಾರಣೆಗೆ ಯೋಗವೇ ಮದ್ದು. ನಿತ್ಯ ಬೆಳಗ್ಗೆ ಕೆಲ ಸಮಯವಾದರೂ ಯೋಗ ಮಾಡುವ ರೂಢಿ ಬೆಳೆಸಿಕೊಳ್ಳಬೇಕು. ಇದರಿಂದ ಆರೋಗ್ಯಕರ ಮತ್ತು ಉತ್ಸಾಹಭರಿತ ಜೀವನ ನಡೆಸಲು ಸಾಧ್ಯ ಎಂದರು.

ಯೋಗಪಟು ಜಗಧೀಶ ಹೊನ್ಕಲ್‌ ಮಾತನಾಡಿದರು. ನಂತರ ಯೋಗಾಭ್ಯಾಸ ನಡೆಸಿಕೊಟ್ಟರು. ಸ್ವಕುಳ ಸಾಳಿ ಸಮಾಜ ಅಧ್ಯಕ್ಷ ರಾಜಕುಮಾರ ಚಿಲ್ಲಾಳ, ಪತ್ರಕರ್ತ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next