Advertisement
ಧರ್ಮಸ್ಥಳ, ಗುರುವಾಯನಕರೆ, ನೆರಿಯ, ಬೆಳ್ತಂಗಡಿ, ಉಜಿರೆ, ಗಂಡಿಬಾಗಿಲು, ಮಂಗಳೂರು ಸೇರಿದಂತೆ ಜಿಲ್ಲೆಯ ಹಲವು ಕಡೆಗಳಲ್ಲಿ ಸೋಮವಾರ ಮಧ್ಯರಾತ್ರಿಯಿಂದ ಮಳೆ ಆರಂಭವಾಗಿತ್ತು. ಅಳದಂಗಡಿ, ನಾರಾವಿ ಸುತ್ತಮುತ್ತ ಮಂಗಳವಾರ ಮಳೆಯಾಗಿದೆ. ಬಂಟ್ವಾಳದ ಹಲವೆಡೆ ಸಾಧಾರಣ ಮಳೆಯಾಗಿದೆ. ರಾತ್ರಿ 1ರ ಸುಮಾರಿಗೆ ಹನಿ ಮಳೆ ಕಾಣಿಸಿ ಕೊಂಡು ನಿಂತಿದ್ದು, ಬಳಿಕ ಸ್ವಲ್ಪ ಹೊತ್ತು ಮಳೆ ಸುರಿದಿತ್ತು
ಬಜಪೆ: ಎಕ್ಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ 3.30ರ ವೇಳೆಗೆ ಮಿಂಚು ಸಿಡಿಲು
ಸಹಿತ ಉತ್ತಮ ಮಳೆಯಾಗಿದ್ದು ಮೂರು ಮನೆಗಳಿಗೆ ಹಾನಿಯಾಗಿದೆ.
Related Articles
Advertisement
ತಾಂಗಾಡಿಯ ಕೃಷಿಕರಾದ ಗಂಪದ ಬೈಲು ಭಾಸ್ಕರ್ ಮೂಲ್ಯ, ಪಲ್ಲದ ಕೋಡಿ ನಾರಾಯಣ ಗೌಡ, ಸುಂದರ ಗೌಡ ಅವರು ಗದ್ದೆಗಳಲ್ಲಿ ಯಂತ್ರದ ಮೂಲಕ ಕಟಾವು ಮಾಡಿ ಭತ್ತವನ್ನು ಗೋಣಿ ಚೀಲದಲ್ಲಿ ತುಂಬಿಸಿ ಗದ್ದೆಯಲ್ಲಿಯೇ ಇಡಲಾಗಿತ್ತು. ರಾತ್ರಿ ಸುರಿದ ಅಕಾಲಿಕ ಮಳೆಯಿಂದಾಗಿ ಸುಮಾರು 35 ಗೋಣಿ ಚೀಲಗಳು ಸಂಪೂರ್ಣ ಒದ್ದೆಯಾಗಿವೆ.