Advertisement

ಯಡ್ತಾಡಿ ಸೇತುವೆ: ಅಪಾಯಕಾರಿ ಮರ ತೆರವಿಗೆ ಆಗ್ರಹ

06:45 AM Oct 05, 2018 | |

ಕೋಟ: ಬ್ರಹ್ಮಾವರ-ಜನ್ನಾಡಿ ಜಿಲ್ಲಾ ಮುಖ್ಯ ರಸ್ತೆಯಲ್ಲಿ ಯಡ್ತಾಡಿ ಸೇತುವೆಯ ಬಳಿ ಅಪಾಯಕಾರಿ ಸ್ಥಿತಿಯಲ್ಲಿ ಒಣಗಿದ ಮರಗಳಿದ್ದು ಇದನ್ನು ತೆರವುಗೊಳಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

Advertisement

ಮರ ಯಾವುದೇ ಕ್ಷಣದಲ್ಲಿ  ಬೀಳುವ ಸ್ಥಿತಿಯಲ್ಲಿದ್ದು ವಾಹನ ಸವಾರರಿಗೆ ಅಪಾಯ ಎದುರಾಗುವ ಸಂಭವವಿದೆ  ಮತ್ತು ಗ್ರಾ.ಪಂ.ನವರು ಅಳವಡಿಸಿದ ಸೋಲಾರ್‌ ವಿದ್ಯುತ್‌ಗೂ ಹಾನಿಯಾಗಲಿದೆ. ಸೇತುವೆಗಿಂತ ಸ್ವಲ್ಪ ಹಿಂದೆ ಇನ್ನೊಂದು ಮರ ವಿದ್ಯುತ್‌ ಕಂಬದ ಮಧ್ಯದಲ್ಲಿ ಅಪಾಯಕಾರಿ ರೀತಿಯಲ್ಲಿದೆ. ಇದರಿಂದ  ವಾಹನ ಸವಾರರಿಗೆ ಎದುರಿನಿಂದ ಬರುವ ವಾಹನಗಳನ್ನು ಗುರುತಿಸಲಾಗದೆ ಹಲವು ಅಪಘಾತಗಳು ನಡೆದಿವೆ. 

ಈ ಕುರಿತು ಈಗಾಗಲೇ ಸ್ಥಳೀಯ ಗ್ರಾ.ಪಂ. ಹಾಗೂ ಸಂಬಂಧಪಟ್ಟ ಇಲಾಖೆಗೆ ದೂರು ನೀಡಿದ್ದು  ಅನಾಹುತ ಎದುರಾಗುವ ಮುನ್ನ ತತ್‌ಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next