Advertisement

ಕಂದೂರು ಶ್ರೀ ಕೃಷ್ಣ ಶಿಶು ಮಂದಿರಕ್ಕೆ ಯಡಿಯೂರಪ್ಪ ಭೇಟಿ

03:20 AM Jul 14, 2017 | Team Udayavani |

ಬಂಟ್ವಾಳ : ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ  ಅವರು ಜು. 13 ರಂದು ಸಜೀಪಮೂಡ  ಕಂದೂರು ಶ್ರೀ ಕೃಷ್ಣ ಶಿಶುಮಂದಿರಕ್ಕೆ ಭೇಟಿ ನೀಡಿ ಅಲ್ಲಿನ ಪುಟಾಣಿಗಳ ಜತೆ ಒಂದಷ್ಟು  ಹೊತ್ತು ಕಳೆದರು. ದುಷ್ಕರ್ಮಿಗಳಿಂದ ಹತ್ಯೆಯಾದ ಶರತ್‌ ಅವರ ಮನೆಗೆ ಭೇಟಿ ನೀಡಿದ ಬಳಿಕ ಅವರು ಶಿಶುಮಂದಿರಕ್ಕೆ ಆಗಮಿಸಿದರು.

Advertisement

ರಾ.ಸ್ವ.ಸೇ.ಸಂಘದ ಡಾ| ಪ್ರಭಾಕರ ಭಟ್‌, ಸಂಸದ ನಳಿನ್‌ ಕುಮಾರ್‌ ಕಟೀಲು, ರಾಜ್ಯ ಬಿಜೆಪಿ ಪ್ರ.ಕಾರ್ಯದರ್ಶಿ ಶೋಭಾ ಕರಂದ್ಲಾಜೆ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು, ಮಾಜಿ ಶಾಸಕ ಕೆ. ಪದ್ಮನಾಭ ಕೊಟ್ಟಾರಿ, ಜಿಲ್ಲಾ ಬಿಜೆಪಿ ಪ್ರ.ಕಾರ್ಯದರ್ಶಿ ಬ್ರಿಜೇಶ್‌ ಚೌಟ, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿಲ್ಲಾ ಬಿಜೆಪಿ ಪ್ರಭಾರಿ ಉದಯ ಕುಮಾರ್‌ ಶೆಟ್ಟಿ, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ  ಮೊದಲಾದವರು ಉಪಸ್ಥಿತರಿದ್ದರು.

ಸ್ಥಳೀಯ ಪ್ರಮುಖರಾದ ಜಯಶಂಕರ ಬಾಸ್ರಿತ್ತಾಯ, ಯಶವಂತ ದೇರಾಜೆ, ಎಂ. ಸುಬ್ರಹ್ಮಣ್ಯ ಭಟ್‌, ಸುರೇಶ್‌ ದೇರಾಜೆ,  ಗ್ರಾ.ಪಂ. ಸದಸ್ಯರಾದ ನವೀನ್‌, ಪ್ರವೀಣ್‌ ಗಟ್ಟಿ,  ಪ್ರಮೀಳಾ ಗಟ್ಟಿ,  ಮಾತಾಜಿ ಚಂದ್ರಕಲಾ  ಮತ್ತಿತರರು  ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next