Advertisement

ರೋಡ್‌ ಶೋ ಮೂಲಕ ಯತೀಂದ್ರ ಮತಯಾಚನೆ

02:59 PM May 08, 2018 | Team Udayavani |

ತಿ.ನರಸೀಪುರ: ರಾಜ್ಯದಲ್ಲಿ ಸ್ಥಿರ ಆಡಳಿತ ನೀಡಿ ಅಭಿವೃದ್ಧಿಗೆ ಮುನ್ನುಡಿ ಬರೆದ ಕಾಂಗ್ರೆಸ್‌ ಗೆಲುವಿಗೆ ಮತ್ತೂಮ್ಮೆ ತಮ್ಮ ಬೆಂಬಲ ನೀಡುವಂತೆ ವರುಣ ಕ್ಷೇತ್ರದ ಅಭ್ಯರ್ಥಿ ಡಾ.ಯತೀಂದ್ರ ಸಿದ್ದರಾಮಯ್ಯ ಮನವಿ ಮಾಡಿದರು.

Advertisement

ಪಟ್ಟಣ ಸಮೀಪದ ಆಲಗೂಡು ಗ್ರಾಮ, ಹೌಸಿಂಗ್‌ ಬೋರ್ಡ್‌  ಹಾಗೂ ಹೆಳವರಹುಂಡಿ ಗ್ರಾಮಗಳಲ್ಲಿ  ರೋಡ್‌ ಶೋ ಮೂಲಕ ಮತಯಾಚಿಸಿ ಮಾತನಾಡಿ, ಎರಡು ಬಾರಿ ಗೆಲ್ಲಿಸುವ ಮೂಲಕ ನಮ್ಮ ತಂದೆಯವರನ್ನು ವಿರೋಧ ಪಕ್ಷದ ನಾಯಕರಾಗಿ, ಮುಖ್ಯಮಂತ್ರಿಯನ್ನಾಗಿ ಮಾಡಿದ್ದೀರಿ.

ಅವರು ಕೊಟ್ಟ ಆಡಳಿತದ ಗೌರವ ಕೀರ್ತಿ ಈ ಕ್ಷೇತ್ರದ ಜನತೆ ಸಲ್ಲುತ್ತದೆ. ತಾವು ನೀಡಿದ ಮತಗಳಿಂದ ಮುಖ್ಯಮಂತ್ರಿಯಾದ ಸಿದ್ದರಾಮಯ್ಯನವರು ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ತಂದು ನಂ. 1 ಸ್ಥಾನದಲ್ಲಿಟ್ಟಿದ್ದಾರೆ. ಎಲ್ಲಾ ಸಮಾಜದ ಜನರಿಗೂ ಅನುಕೂಲವಾಗುವ ಯೋಜನಾ ಭಾಗ್ಯಗಳನ್ನು ನೀಡುವ ಮೂಲಕ ರಾಜ್ಯದ ಎಲ್ಲಾ ಸಮುದಾಯಗಳ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ.

ಬಿಜೆಪಿ ದೇಶದ ಆಡಳಿತ ಚುಕ್ಕಾಣಿ ಹಿಡಿದ ಮೇಲೆ ಜನ ಸಮುದಾಯ ಪ್ರಗತಿ ಕಂಡಿಲ್ಲ. ಬಡವರು ಬಡವರಾಗಿಯೇ ಉಳಿದಿದ್ದಾರೆ, ಶ್ರೀಮಂತರು ಮತ್ತಷ್ಟು ಶ್ರೀಮಂತರಾಗಿದ್ದಾರೆ. ಇಂತಹ ಪಕ್ಷವನ್ನು ಬೆಂಬಲಿಸದೇ ಮತ್ತೆ ಕಾಂಗ್ರೆಸ್‌ ಆಡಳಿತ ಸ್ಥಾಪನೆಗೆ ಅವಕಾಶ ನೀಡುವಂತೆ ಮನವಿ ಮಾಡಿದರು.

ಕಳೆದ 5 ವರ್ಷಗಳಲ್ಲಿ ಆಡಳಿತದಲ್ಲಿ ಕಪ್ಪು ಚುಕ್ಕೆ ಇಲ್ಲದಂತೆ ಕೆಲಸ ಮಾಡಿ ಹೆಸರು ಗಳಿಸಿದ್ದಾರೆ. ಆ ಗೌರವ ಈ ಕ್ಷೇತ್ರದ ಜನತೆಗೆ ಸಲ್ಲುತ್ತದೆ. ನಿಮ್ಮ ಆಶೀರ್ವಾದ ಈ ಚುನಾವಣೆಯಲ್ಲಿ ನನಗೆ ನೀಡುವಂತೆ ಮನವಿ ಮಾಡಿದರು.

Advertisement

ಬಳಿಕ ಕಾಲೋನಿಯ ವಿವಿಧ ರಸ್ತೆಗಳಲ್ಲಿ ಸಂಚರಿಸಿ ಮತಯಾಚನೆ ಮಾಡಿದರು. ಬಳಿಕ ಹೆಳವರಹುಂಡಿ ಮಠಕ್ಕೆ ಭೇಟಿ ನೀಡಿದ ಅವರು ಸ್ವಾಮೀಜಿಯವರ ಆಶೀರ್ವಾದ ಪಡೆದರು. ಗ್ರಾಮದ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಮುಖಂಡರಾದ ಕೆ.ಸಿ.ಬಲರಾಂ. ಗೋಪಾಲರಾಜು, ವಿಷಕಂಠಮೂರ್ತಿ, ಟಿ.ಎಂ.ನಂಜುಂಡಸ್ವಾಮಿ, ವಿಷಕಂಠಮೂರ್ತಿ, ಹೆಳವರಹುಂಡಿ ಸೋಮು, ಮನ್ನೆಹುಂಡಿ ಮಹೇಶ್‌, ಉಮೇಶ್‌, ಮಹೇಶ್‌, ವಾಠಾಳ್‌ ರಾಚೇಗೌಡ, ಬಿ.ಸ್ವಾಮಿ, ಶಿವಶಂಕರ್‌, ಸಂತೃಪ್ತಿಕುಮಾರ್‌, ಎಂ.ಕೆ.ಸಹದೇವ್‌, ಸೋಮಣ್ಣ, ಪ್ರಭಾಕರ್‌,  ಹಕ್ಕೂರು ಲಿಂಗರಾಜು, ಕಿರಗಸೂರು ಕಾಂತರಾಜು, ಶಿವಸ್ವಾಮಿ, ಮದನ್‌ ಗೌಡ ನವೀನ್‌ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next