Advertisement

ಆಪ್‌ ವಿರುದ್ಧ ತುಘಲಕ್‌ಶಾಹಿ ಆದೇಶ: ಯಶ್ವಂತ್‌, ಶತ್ರುಘ್ನ ಸಿನ್ಹಾ

11:22 AM Jan 22, 2018 | udayavani editorial |

ಹೊಸದಿಲ್ಲಿ : ಲಾಭದಾಯಕ ಹುದ್ದೆ ಹೊಂದಿದ್ದ ಕಾರಣಕ್ಕೆ ಆಮ್‌ ಆದ್ಮಿ ಪಕ್ಷದ ದಿಲ್ಲಿ ಸರಕಾರದ 20 ಶಾಸಕರು ಅನರ್ಹತೆಗೆ ಗುರಿಯಾಗಿರುವ ಹಿನ್ನೆಲೆಯಲ್ಲಿ ಸಂತ್ರಸ್ತ ಆಪ್‌ಗೆ ಬಿಜೆಪಿ ಬಂಡುಕೋರ ನಾಯಕರಾದ ಯಶ್ವಂತ್‌ ಸಿನ್ಹಾ ಮತ್ತು ಶತ್ರುಘ್ನ ಸಿನ್ಹಾ ಅವರು ಬೆಂಬಲ ಪ್ರಕಟಿಸಿದ್ದಾರೆ.

Advertisement

ಸಾಂವಿಧಾನಿಕ ಅಧಿಕಾರಿಗಳು ಈ ಪ್ರಕರಣದಲ್ಲಿ ಕೇಂದ್ರ ಸರಕಾರದ ಕೈಗೊಂಬೆಗಳಂತೆ ವರ್ತಿಸಿರುವುದು ಅತ್ಯಂತ ದುರದೃಷ್ಟಕರ ಎಂದು ಯಶ್ವ,ತ್‌ ಸಿನ್ಹಾ ಮತ್ತು ಶತ್ರುಘ್ನ ಸಿನ್ಹಾ ಆರೋಪಿಸಿದ್ದಾರೆ.

20 ಆಪ್‌ ಶಾಸಕರನ್ನು ಅನರ್ಹಗೊಳಿಸಿರುವ ರಾಷ್ಟ್ರಪತಿಗಳ ಆದೇಶವು ನೈಸರ್ಗಿಕ ನ್ಯಾಯದ ಉಲ್ಲಂಘನೆಯಾಗಿದೆ; ಯಾವುದೇ ವಿಚಾರಣೆ ನಡೆಸಿದ್ದಿಲ್ಲ; ಹೈಕೋರ್ಟ್‌ ತೀರ್ಪು ಬರುವ ತನಕ ಕಾದದ್ದೂ ಇಲ್ಲ; ಇದು ತುಘಲಕ್‌ಶಾಹಿಯ ಅತ್ಯಂತ ಕೆಟ್ಟ ಆದೇಶವಾಗಿದೆ ಎಂದು ಉಭಯ ಬಂಡುಕೋರ ಬಿಜೆಪಿ ನಾಯಕರು ಟೀಕಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next