Advertisement

ಸ್ಮೈಲ್ ಎಸೆದ ಯಶ್‌! ನಗುವೊಂದು ಆಯುಧ, ನಗುವೊಂದು ಔಷಧ

03:45 AM Jan 20, 2017 | Harsha Rao |

“ಗಾಂಧಿನಗರಕ್ಕೆ ಬಂದ ಸಂದರ್ಭದಲ್ಲಿ ಬಹುತೇಕ ನಿರ್ಮಾಪಕರ ಹಿಂದೆ ಅಲೆದಾಡಿದ್ದುಂಟು. ಆದರೆ, ಕೆ.ಮಂಜು ಅವರನ್ನು ಭೇಟಿ ಮಾಡಿ ಕಥೆ ಹೇಳಿದ ಎರಡು ದಿನದಲ್ಲೇ ಚಿತ್ರಕ್ಕೆ ಚಾಲನೆ ಸಿಕ್ಕಿತು’

Advertisement

“ನಗು ಎಂಬ ವೆಪನ್‌ ಲೈಫ್ನಲ್ಲಿದ್ದರೆ ಏನು ಬೇಕಾದರೂ ಸಾಧಿಸಬಹುದು. ಜಗತ್ತಿನಲ್ಲಿ ಭಾಷೆ ಗೊತ್ತಿಲ್ಲದಿದ್ದರೂ, ಒಂದು ಸ್ಮೈಲ್ನಿಂದ ಗೆಳೆತನವೇ ಸೃಷ್ಟಿಯಾಗುತ್ತೆ…’ ಹೀಗೆ ಸ್ಮೈಲ್ ಮಾಡುತ್ತಲೇ ಹೇಳುತ್ತಾ ಹೋದರು ನಟ ಯಶ್‌. 
ಸಂದರ್ಭ, “ಸ್ಮೈಲ್ ಪ್ಲೀಸ್‌’ ಆಡಿಯೋ ಸಿಡಿ ಬಿಡುಗಡೆ. ಚಿತ್ರದ ಮೂರು ಹಾಡುಗಳು ಮತ್ತು ಟ್ರೇಲರ್‌ವೊಂದನ್ನು ತೋರಿಸಿದ ಚಿತ್ರತಂಡ, ಯಶ್‌ ಅವರಿಂದ ಆಡಿಯೋ ಸಿಡಿ ಬಿಡುಗಡೆ ಮಾಡಿಸಿತು. ಸಿಡಿ ರಿಲೀಸ್‌ ಮಾಡಿದ ಯಶ್‌, “ಚಿತ್ರದ ಹಾಡು ಮತ್ತು ಟ್ರೇಲರ್‌ ನೋಡಿದಾಗ, ಎಲ್ಲೋ ಒಂದು ಕಡೆ ಪಾಸಿಟಿವ್‌ ವಿಷಯಗಳಿವೆ ಎನಿಸುತ್ತೆ. ಲೈಫ್ ಬಗ್ಗೆ ಸಿನಿಮಾ ಇರಬಹುದೇನೋ. ಚಿಕ್ಕ ಚಿಕ್ಕ ಎಮೋಷನ್ಸ್‌ ಇಲ್ಲಿ ಕಾಣಿಸುತ್ತಿವೆ. ಎಷ್ಟೇ ಕಷ್ಟವಿದ್ದರೂ, ಒಂದು ನಗು ಎಲ್ಲವನ್ನೂ ಮರೆಸುತ್ತೆ. ಇದೊಂದು ಒಳ್ಳೆಯ ಸಿನಿಮಾ ಆಗಿ ಹೊರಬರಲಿ. ಇಲ್ಲಿರುವ ಪ್ರತಿಯೊಬ್ಬರಿಗೂ ಚಿತ್ರ ಯಶಸ್ಸು ಕೊಡಲಿ’ ಅಂತ ಶುಭಹಾರೈಸಿದರು ಯಶ್‌.

ನಿರ್ದೇಶಕ ರಘು ಸಮರ್ಥ್ಗೆ “ಸ್ಮೈಲ್ ಪ್ಲೀಸ್‌’ ಮೊದಲ ಚಿತ್ರ. ಹಾಗಾಗಿ, ಅಂದು ಅವರು ಎಲ್ಲರಿಗೂ ಥ್ಯಾಂಕ್ಸ್‌ ಹೇಳುವುದನ್ನು ಮರೆಯಲಿಲ್ಲ. ಈ ಸಿನಿಮಾದ ಹಿಂದೆ ದುಡಿದ ಪ್ರತಿಯೊಬ್ಬರ ಸಹಕಾರವನ್ನು ಗುಣಗಾನ ಮಾಡಿದರು. “ಗಾಂಧಿನಗರಕ್ಕೆ ಬಂದ ಸಂದರ್ಭದಲ್ಲಿ ಬಹುತೇಕ ನಿರ್ಮಾಪಕರ ಹಿಂದೆ ಅಲೆದಾಡಿದ್ದುಂಟು. ಆದರೆ, ಕೆ.ಮಂಜು ಅವರನ್ನು ಭೇಟಿ ಮಾಡಿ ಕಥೆ ಹೇಳಿದ ಎರಡು ದಿನದಲ್ಲೇ ಚಿತ್ರಕ್ಕೆ ಚಾಲನೆ ಸಿಕ್ಕಿತು. ಚಿತ್ರದಲ್ಲಿ ಒಳ್ಳೆಯ ಸಂದೇಶವಿದೆ.

ಮನರಂಜನೆ ಇಲ್ಲಿ ಹೈಲೆಟ್‌ ಆಗಿದೆ. ಜಗದೀಶ್‌ ವಾಲಿ ಚಿತ್ರದ ಕಣ್ಣು. ಅನೂಪ್‌ ಸೀಳಿನ್‌ ನನ್ನ ನಿರೀಕ್ಷೆ ಮೀರಿ ಹಾಡುಗಳನ್ನು ಕೊಟ್ಟಿದ್ದಾರೆ. ಇನ್ನು, ಗುರುನಂದನ್‌, ಕಾವ್ಯಾಶೆಟ್ಟಿ, ರಂಗಾಯಣ ರಘು ಎಲ್ಲರೂ ನನ್ನ ಕನಸಿಗೆ ಬಣ್ಣ ತುಂಬಿದ್ದಾರೆ. ಮೊದಲ ಪ್ರಯತ್ನದಲ್ಲಿ ತಪ್ಪುಗಳಿದ್ದರೆ ಬದಿಗೊತ್ತಿ ಸಹಕರಿಸಿ’ ಎಂದರು ರಘು ಸಮರ್ಥ್.

“ಅವಕಾಶ ಕೊಟ್ಟ ನಿರ್ದೇಶಕ, ನಿರ್ಮಾಪಕರಿಗೆ ಥ್ಯಾಂಕ್ಸ್‌’ ಎಂದು ಮಾತಿಗಿಳಿದ ಗುರುನಂದನ್‌, “ಇಲ್ಲಿ ಮನರಂಜನೆಯೇ ಹೈಲೆಟ್‌. ಮೊದಲ ಸಿನಿಮಾ ನೋಡಿದವರಿಗೆ ಈ ಚಿತ್ರವೂ ಇಷ್ಟವಾಗಲಿದೆ. ಕುಟುಂಬ ಸಮೇತ ಬಂದು ಸಿನಿಮಾ ನೋಡಬೇಕು. ಇದು ಎಲ್ಲಾ ವರ್ಗಕ್ಕೂ ಸೀಮಿತವಾದ ಸಿನಿಮಾ’ ಅಂದರು ಗುರುನಂದನ್‌.

Advertisement

ಕೆ.ಮಂಜು ಇಲ್ಲಿ ಹಾಡೊಂದಕ್ಕೆ ನೃತ್ಯ ನಿರ್ದೇಶನವನ್ನೂ ಮಾಡಿದ್ದಾರಂತೆ. ಅಷ್ಟೇ ಅಲ್ಲ, ಹಾಡಲ್ಲಿ ನಾಯಕ, ನಾಯಕಿ ನಡುವೆ ಲಿಪ್‌ಲಾಕ್‌ ಮಾಡಿಸುವಲ್ಲಿಯೂ ಯಶಸ್ವಿಯಾಗಿದ್ದಾರಂತೆ. ಕಥೆ, ಸಂದರ್ಭಕ್ಕೆ ಪೂರಕವಾಗಿದ್ದರಿಂದ ಲಿಪ್‌ಲಾಕ್‌ ಮಾಡಿಸಲಾಗಿದೆ ಎಂಬುದು ಮಂಜು ಮಾತು.

ಇನ್ನು, ಕಾವ್ಯಾ ಶೆಟ್ಟಿಗೆ ಶೀರ್ಷಿಕೆಯಂತೆಯೇ ಸಿನಿಮಾವೂ ಮೂಡಿಬಂದಿರುವ ಖುಷಿ ಇದೆಯಂತೆ. ಸಿನಿಮಾಗೆ ಬಂದವರು ಆರಂಭದಿಂದ ಅಂತ್ಯದಿಂದ ನಗ್ತಾನೇ ಇರ್ತಾರೆ ಎಂಬ ಗ್ಯಾರಂಟಿ ಕೊಟ್ಟರು ಕಾವ್ಯಾ. ನೇಹಾ ಪಾಟೀಲ್‌, ಅನೂಪ್‌ ಸೀಳಿನ್‌, ರಂಗಾಯಣ ರಘು “ಸ್ಮೈಲ್’ ಕೊಡುತ್ತಲೇ ಸಿನಿಮಾ ಬಗ್ಗೆ ಮಾತಾಡಿ ಸುಮ್ಮನಾದರು.

Advertisement

Udayavani is now on Telegram. Click here to join our channel and stay updated with the latest news.

Next