Advertisement

ಯಕ್ಷಗಾನ ಕಲಾವಿದ ಕೆರೆಮನೆ ರಾಮ ಹೆಗಡೆ ಇನ್ನಿಲ್ಲ

11:25 PM Sep 18, 2019 | Lakshmi GovindaRaju |

ಹೊನ್ನಾವರ: ಕೆರೆಮನೆ ಮಹಾಬಲ ಹೆಗಡೆಯವರ ಮಗ, ಪ್ರಸಿದ್ಧ ಯಕ್ಷಗಾನ ಕಲಾವಿದ, ನಿವೃತ್ತ ಪ್ರಾಧ್ಯಾಪಕ ಕೆರೆಮನೆ ರಾಮ ಮಹಾಬಲ ಹೆಗಡೆ (67) ಬುಧವಾರ ನಿಧನರಾದರು. ಕಳೆದ ವಾರ ಮೆದುಳಿನ ಆಘಾತದಿಂದ ಅವರನ್ನು ಮಣಿಪಾಲ ಆಸ್ಪತ್ರೆಗೆ ಸೇರಿಸಲಾಗಿತ್ತು.

Advertisement

ಸ್ವಲ್ಪ ಚೇತರಿಕೆ ಕಂಡು ಬರುತ್ತಿರುವಾಗಲೇ ಹೃದಯಸ್ತಂಭನವಾಗಿ ಕೊನೆಯುಸಿರೆಳೆದಿದ್ದಾರೆ. ದಕ್ಷಿಣ ಕನ್ನಡದ ಅಳಿಕೆ ಶಿಕ್ಷಣ ಸಂಸ್ಥೆಯಲ್ಲಿ ಗಣಿತ ಪ್ರಾಧ್ಯಾಪಕರಾಗಿ ಸುದೀರ್ಘ‌ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಅವರು, ತಂದೆ ಯಂತೆ ಯಕ್ಷಗಾನ ವೇಷ, ಹಿಂದುಸ್ಥಾನಿ ಸಂಗೀತ ಮತ್ತು ಯಕ್ಷಗಾನ ಭಾಗವತಿಕೆಗಳಲ್ಲಿ ಪರಿಣತಿ ಹೊಂದಿದ್ದರು. ಕಲೆ, ಸಾಹಿತ್ಯ, ಸಂಸ್ಕೃತಿ ಕುರಿತು ಆಳವಾಗಿ ಅಧ್ಯಯನ ಮಾಡಿ, ಸಹೃದಯ ವಿಮರ್ಶಕರಾಗಿ, ಪರಂಪರೆಯ ಕೃಷಿಕರಾಗಿದ್ದರು.

ತಂದೆಯ ಪಾತ್ರಗಳನ್ನು ಅಭಿನಯಿಸುತ್ತ, ತಂದೆಯ ಸ್ಮರಣೆ ದಿನದಂದು ವಿಶೇಷ ಕಾರ್ಯಕ್ರಮ ಏರ್ಪಡಿಸುತ್ತಿದ್ದ ಅವರು ಕಲಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು. ಪ್ರಸಿದ್ಧ ಹಿಂದುಸ್ಥಾನಿ ಕಲಾವಿದ, ಕಲಾಪೋಷಕ ಕಲ್ಭಾಗ ಗೋವಿಂದ ಹೆಗಡೆಯವರ ಮಗಳು ನಾಗವೇಣಿ, ರಾಮ ಹೆಗಡೆಯವರ ಪತ್ನಿ. ಈ ದಂಪತಿಯ ಇಬ್ಬರು ಪುತ್ರರ ಪೈಕಿ ಒಬ್ಬ ಅಮೆರಿಕ, ಇನ್ನೊಬ್ಬ ಬೆಂಗಳೂರಿನಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next