Advertisement

ಯಕ್ಷ ಶಿಕ್ಷಣ ಎಲ್ಲ ಶಾಲೆಗಳಿಗೆ -ಶೀಘ್ರ ಸಭೆ: ಶಾಸಕ ಭಟ್‌

04:30 PM Jun 12, 2018 | Harsha Rao |

ಉಡುಪಿ: ಯಕ್ಷ ಶಿಕ್ಷಣ ಟ್ರಸ್ಟ್‌ನ ಮೂಲಕ ಉಡುಪಿ ವಿಧಾನಸಭಾ ಕ್ಷೇತ್ರದ 47 ಶಾಲೆಗಳಲ್ಲಿ ಮಕ್ಕಳಿಗೆ ಯಕ್ಷಗಾನ ಕಲಿಸಿಕೊಡಲಾಗುತ್ತಿದೆ. ಕೆಲವೇ ಕೆಲವು ಶಾಲೆಗಳಲ್ಲಿ ಕಲಿಸಲಾಗುತ್ತಿಲ್ಲ. ಅದಕ್ಕಾಗಿ ಶೀಘ್ರ ಶಿಕ್ಷಣಾಧಿಕಾರಿ, ಮುಖ್ಯೋಪಾಧ್ಯಾಯರು, ಯಕ್ಷಗಾನ ಗುರುಗಳ ಸಭೆ ಕರೆದು ಎಲ್ಲ ಶಾಲೆಗಳಲ್ಲಿಯೂ ಯಕ್ಷಗಾನ ಕಲಿಕೆ ಮಕ್ಕಳಿಗೆ ಸಿಗುವಂತೆ ಮಾಡಲಾಗುವುದು ಎಂದು ಯಕ್ಷ ಶಿಕ್ಷಣ ಟ್ರಸ್ಟ್‌ ಕಾರ್ಯಾಧ್ಯಕ್ಷ, ಶಾಸಕ ಕೆ.ರಘುಪತಿ ಭಟ್‌ ಹೇಳಿದರು.

Advertisement

ಟ್ರಸ್ಟ್‌ನ ಅಧ್ಯಕ್ಷ ಪಲಿಮಾರು ಪರ್ಯಾಯ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರ ಅಧ್ಯಕ್ಷತೆ ಯಲ್ಲಿ ಶ್ರೀಕೃಷ್ಣ ಮಠದ ಕನಕ ಮಂಟಪದಲ್ಲಿ ಸೋಮ ವಾರ ನಡೆದ ವಾರ್ಷಿಕ ಮಹಾಸಭೆ ಯಲ್ಲಿ ಶಾಸಕರು ಮಾತನಾಡಿದರು.

ಟ್ರಸ್ಟ್‌ ಉಪಾಧ್ಯಕ್ಷ ಡಾ| ವಿಜಯ ಬಲ್ಲಾಳ್‌, ಕಾರ್ಯದರ್ಶಿ ಮುರಲಿ ಕಡೆಕಾರ್‌, ಜತೆ ಕಾರ್ಯದರ್ಶಿ ನಾರಾಯಣ ಹೆಗಡೆ,
ಖಜಾಂಚಿ ಸುಬ್ರಹ್ಮಣ್ಯ ಬಾಸ್ರಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next