Advertisement

Yedamangala: ಶಾಲೆಯ ಸೊತ್ತುಗಳಿಗೆ ಹಾನಿ: ಪ್ರಕರಣ ದಾಖಲು

10:55 PM Jul 21, 2024 | Team Udayavani |

ಸುಳ್ಯ: ಎಡಮಂಗಲದ ಸರಕಾರಿ ಪ್ರೌಢಶಾಲೆಯ ಕೊಠಡಿಯ ಬೀಗ ಒಡೆದು ಸೊತ್ತುಗಳಿಗೆ ಹಾನಿ ಮಾಡಿರುವ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಶಾಲೆಯ ಮುಖ್ಯದ್ವಾರದ ಶೆಟರ್‌ನ ಬೀಗವನ್ನು ಒಡೆದು ಒಳ ಪ್ರವೇಶಿಸಿದ ಕಿಡಿಗೇಡಿಗಳು ಮುಖ್ಯ ಶಿಕ್ಷಕರ ಕೊಠಡಿಯಲ್ಲಿದ್ದ ಎರಡು ಲ್ಯಾಪ್‌ಟಾಪ್‌, ಒಂದು ಕಂಪ್ಯೂಟರ್‌, ನೋಟೀಸ್‌ ಬೋರ್ಡ್‌, ಕಿಟಕಿಗಳ ಗ್ಲಾಸ್‌, ಮುಖ್ಯ ಶಿಕ್ಷಕರ ನಾಮಫಲಕ ಮುಂತಾದವುಗಳಿಗೆ ಹಾನಿ ಮಾಡಿದ್ದಾರೆ.

ಕಪಾಟುಗಳಲ್ಲಿದ್ದ ದಾಖಲೆ ಪತ್ರಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದು, ಸುಮಾರು ಅಂದಾಜು 85 ಸಾ.ರೂ. ನಷ್ಟ ಅಂದಾಜಿಸಲಾಗಿದೆ.

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next