Advertisement

ಕಳೆದೆರಡು ದಿನದಿಂದ ಜಿಲ್ಲೆಯಲ್ಲಿ ಉತ್ತಮ ಮಳೆ

04:01 PM Jul 04, 2020 | Naveen |

ಯಾದಗಿರಿ: ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು ಹಳ್ಳಕೊಳ್ಳಗಳಿಗೆ ಜೀವಕಳೆ ಬಂದಿದೆ. ಈ ಬಾರಿ ಮುಂಗಾರು ಮಳೆ ರೈತರ ಮೊಗದಲ್ಲಿ ಹರ್ಷ ಮೂಡಿಸಿದೆ.

Advertisement

ಜಿಲ್ಲೆಯ ಗುರುಮಠಕಲ್‌ ವ್ಯಾಪ್ತಿಯಲ್ಲಿ ಅತೀ ಹೆಚ್ಚು 85 ಮಿ.ಮೀ. ಮಳೆಯಾಗಿದ್ದು ಗುರುವಾರ 28 ಮಿ.ಮೀ ಸೇರಿ ಕಳೆದೆರಡು ದಿನಗಳಲ್ಲಿ 113 ಮಿ.ಮೀ. ಮಳೆ ಸುರಿದಿದೆ. ಯಾದಗಿರಿ ವ್ಯಾಪ್ತಿಯಲ್ಲಿ 63 ಮಿ.ಮೀ, ವಡಗೇರಾದಲ್ಲಿ 55 ಮಿ.ಮೀ. ಶಹಾಪುರದಲ್ಲಿ 51 ಮಿ.ಮೀ. ಮತ್ತು ಸುರಪುರ ಹಾಗೂ ಹುಣಸಗಿಯಲ್ಲಿ ಅತಿ ಕಡಿಮೆ ಕ್ರಮವಾಗಿ 7 ಹಾಗೂ 4 ಮಿ.ಮೀ. ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next