Advertisement

Yadagiri: ಅನ್ಯಕೋಮಿನ ಯುವಕರಿಂದ ದಲಿತ ಯುವಕನ‌ ಕೊಲೆ

04:35 PM Apr 22, 2024 | Team Udayavani |

ಯಾದಗಿರಿ: ಅನ್ಯಕೋಮಿನ ಯುವಕರು ಸೇರಿ ದಲಿತ ಯುವಕನ ಕೊಲೆ ಮಾಡಿರುವ ಘಟನೆ ಯಾದಗಿಯಲ್ಲಿ ನಡೆದಿದೆ.

Advertisement

ಯಾದಗಿರಿ ನಗರದ ಶಹಾಪುರಪೇಟ ಬಡವಾಣೆಯ ರಾಕೇಶ್ (22) ಯುವಕ ಕೊಲೆಯಾಗಿದ್ದಾನೆ.

ಫಯಾಜ್ ಹಾಗೂ ನಾಲ್ಕು ಜನ ಸೇರಿ ಕೊಲೆ ಮಾಡಿದ್ದಾಗಿ ವರದಿಯಾಗಿದೆ. ರೊಟ್ಟಿ ಕೇಂದ್ರಕ್ಕೆ ರೊಟ್ಟಿ ತರಲು ತೆರಳಿದ್ದ ರಾಕೇಶ ಜೊತೆ ಫಯಾಜ್ ಜಗಳವಾಗಿದ್ದು, ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಯುವಕನ ಗುಪ್ತಾಂಗಕ್ಕೆ ಕಾಲಿನಿಂದ ಒದ್ದು ಕೊಲೆ ಮಾಡಲಾಗಿದೆ.

ಕೊಲೆಯಾದ ಯುವಕನ ತಾಯಿ ದೂರು ದಾಖಲಿಸಿದ್ದು, ಘಟನಾ ಸ್ಥಳಕ್ಕೆ ಯಾದಗಿರಿ ಎಸ್‌.ಪಿ ಜಿ.ಸಂಗೀತಾ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ‌

ಪೊಲೀಸರು ಸ್ಥಳಕ್ಕೆ ಬಂದ ಬಳಿಕ ಮೃತದೇಹ ಶವಗಾರಕ್ಕೆ ಸಾಗಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next