Advertisement

ಯಾದಗಿರಿ: 10 ಜನರಿಗೆ ಸೋಂಕು

12:20 PM Jul 20, 2020 | Suhan S |

ಯಾದಗಿರಿ: ಜಿಲ್ಲೆಯಲ್ಲಿ ರವಿವಾರ ಮತ್ತೆ 10 ಜನರಲ್ಲಿ ಮಹಾಮಾರಿ ಕೋವಿಡ್ ವಕ್ಕರಿಸಿದ್ದು ಸೋಂಕಿತರ ಸಂಖ್ಯೆ 1553ಕ್ಕೆ ಏರಿಕೆಯಾಗಿದೆ.

Advertisement

ಜಿಲ್ಲೆಯಲ್ಲಿ ಹೆಚ್ಚಾಗಿ ರೋಗ ಲಕ್ಷಣ (ಐಎಲ್‌ಐ) ಇರುವ ಹೆಚ್ಚಿನ ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಯಾದಗಿರಿ ನಗರದ ಎಸ್‌ಬಿಐ ಮುಖ್ಯ ಶಾಖೆ ಸಿಬ್ಬಂದಿ 48 ವರ್ಷದ ಪುರುಷ (ಪಿ-64780), ಯಾದಗಿರಿಯ ಬಡಿಗೇರ ಓಣಿಯ 40 ವರ್ಷದ ಪುರುಷ (ಪಿ-63476), ಲಾಡಿಸ್‌ ಗಲ್ಲಿಯ 43 ವರ್ಷದ ಪುರುಷ (ಪಿ-64124), ಸುರಪುರ ತಾಲೂಕಿನ ಹೇಮನೂರನ 63 ವರ್ಷದ ಪುರುಷ (ಪಿ- 64248), ರಂಗಂಪೇಟ್‌ನ 58 ವರ್ಷದ ಪುರುಷ (ಪಿ-64421), ಖಾನಪುರದ 65 ವರ್ಷದ ಪುರುಷ (ಪಿ-64676), ಸುರಪುರದ 30 ವರ್ಷದ ಪುರುಷ (ಪಿ-64715) ಮತ್ತು ಸುರಪುರದ 47 ವರ್ಷದ ಮಹಿಳೆ (ಪಿ-64889) ಸೇರಿ ಸೋಂಕಿನ ಸಂಪರ್ಕದ ಮೂಲವೇ ಪತ್ತೆಯಾಗದ ಯಾದಗಿರಿಯ 28 ವರ್ಷದ ಪುರುಷ (ಪಿ-63510) ಸೋಂಕಿಗೆ ತುತ್ತಾಗಿದ್ದಾರೆ. ಇನ್ನು ಜಿಲ್ಲಾಡಳಿತ ರವಿವಾರ 54 ಜನರ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳಿಸಿದೆ. ರವಿವಾರ 550 ಮಂದಿಯ ವರದಿ ನೆಗೆಟಿವ್‌ ಬಂದಿವೆ.

ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 3,483 ಜನ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ 5,211 ಜನರನ್ನು ಪ್ರತ್ಯೇಕವಾಗಿರಿಸಲಾಗಿದೆ. ಜಿಲ್ಲೆಯಲ್ಲಿ 131 ಕಂಟೈನ್ಮೆಂಟ್‌ ಝೋನ್‌ ಗಳನ್ನು ರಚಿಸಲಾಗಿದ್ದು, ಇದರಲ್ಲಿ 6 ಕಂಟೈನ್ಮೆಂಟ್‌ ಝೋನ್‌ಗಳನ್ನು ತೆರವುಗೊಳಿಸಲಾಗಿದೆ. ಹೊಸ ಜಿಲ್ಲಾಸ್ಪತ್ರೆಯಲ್ಲಿ 79 ಜನರನ್ನು ಪತ್ಯೇಕವಾಗಿರಿಸಲಾಗಿದೆ. ಸುರಪುರ 7 ಜನ ಹಾಗೂ ಬಂದಳ್ಳಿ ಏಕಲವ್ಯ ಕೋವಿಡ್ ಕೇರ್‌ ಸೆಂಟರ್‌ನಲ್ಲಿ 10 ಜನರನ್ನು ಅವಲೋಕನೆಗಾಗಿ ಇರಿಸಲಾಗಿದೆ. ಜಿಲ್ಲೆಯ 1 ಸಾಂಸ್ಥಿಕ ಕ್ವಾರಂಟೈನ್‌ ಸೆಂಟರ್‌ನಲ್ಲಿ ಒಟ್ಟು 10 ಜನರನ್ನು ಪ್ರತ್ಯೇಕವಾಗಿರಿಸಲಾಗಿದೆ ಎಂದು ಅಪರ ಜಿಲ್ಲಾಧಿ ಕಾರಿ ಪ್ರಕಾಶ ಜಿ.ರಜಪೂತ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next