Advertisement

ಧೋನಿ ಟೀಂ ಇಂಡಿಯಾಗೆ ಬಂದರೆ ನನಗೆ ಖಂಡಿತ ಅವಕಾಶ ಸಿಗುವುದಿಲ್ಲ: ಸಹಾ

10:59 AM May 18, 2020 | keerthan |

ಕೋಲ್ಕತ್ತಾ: ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿಯಾದ ನಂತರ ವಿಕೆಟ್ ಹಿಂದಿನ ಸ್ಥಾನವನ್ನು ತುಂಬಿದ್ದು ಬಂಗಾಲದ ಆಟಗಾರ ವೃದ್ಧಿಮಾನ್ ಸಹಾ. ಈ ಮಧ್ಯೆ ಸಹಾ ತಾನು ಟೀಂ ಇಂಡಿಯಾಗೆ ಎಂಟ್ರಿ ಕೊಟ್ಟ ಆ ಸಂದರ್ಭವನ್ನು ಮತ್ತೆ ನೆನಪಿಸಿಕೊಂಡಿದ್ದಾರೆ.

Advertisement

2014ರಲ್ಲಿ ಮಹೇಂದ್ರ ಸಿಂಗ್ ಧೋನಿ ಟೆಸ್ಟ್ ಕ್ರಿಕೆಟ್ ಗೆ ರಾಜಿನಾಮೆ ನೀಡಿದ್ದರು. ಆದರೆ ವೃದ್ಧಿಮಾನ್ ಸಹಾ ಅದಕ್ಕೂ ಮೊದಲೇ ಒಂದು ಟೆಸ್ಟ್ ಪಂದ್ಯ ಆಡಿದ್ದರು. ಆದರೆ ವಿಕೆಟ್ ಕೀಪರ್ ಆಗಿ ಅಲ್ಲ, ಫೀಲ್ಡರ್ ಆಗಿ.

ಖಾಸಿ ಕ್ರೀಡಾ ಪತ್ರಿಕೆಗೆ ಮಾತನಾಡುತ್ತ ಸಹಾ ತನ್ನ ಮೊದಲ ಟೆಸ್ಟ್ ಪಂದ್ಯದ ಮೆಲುಕು ಹಾಕಿದ್ದಾರೆ. ನಾಗ್ಪುರ ಟೆಸ್ಟ್ ಪಂದ್ಯಕ್ಕೂ ಮುನ್ನ ಲಕ್ಷ್ಮಣ್ ಗಾಯಗೊಂಡಿದ್ದರು. ನಾನು 15ರ ಬಳಗದಲ್ಲಿದ್ದೆ. ಲಕ್ಷ್ಮಣ್ ಬದಲಿಗೆ ರೋಹಿತ್ ಶರ್ಮಾರನ್ನು ಕರೆಸಲಾಗಿತ್ತು. ಆದರೆ ಪಂದ್ಯಕ್ಕೂ ಮೊದಲು ಅಭ್ಯಾಸ ನಡೆಸುವಾಗ ನಾನು ಮತ್ತು ರೋಹಿತ್ ಢಿಕ್ಕಿ ಹೊಡೆದುಕೊಂಡಿದ್ದೆವು. ರೋಹಿತ್ ಸ್ವಲ್ಪ ಗಾಯಗೊಂಡಿದ್ದರು. ಆದರೆ ನಾನು ಆಡುವ ಬಗ್ಗೆ ಧೋನಿ ಹೇಳಿರಲಿಲ್ಲ.

ಟೆಸ್ಟ್ ಪಂದ್ಯದ ಮೊದಲ ದಿನ ಟಾಸ್ ಗೆ ತೆರಳುತ್ತದ್ದ ಧೋನಿ, ನನಗೆ ಕರೆದು ನೀನು ಇವತ್ತು ಆಡುತ್ತಿದ್ದೀಯ ಎಂದರು. ಆಡುವ ಬಗ್ಗೆ ಗೊತ್ತಿರದ ನಾನು ಸರಿಯಾದ ಅಭ್ಯಾಸ ಮಾಡದೇ ಡೇಲ್ ಸ್ಟೇನ್, ಮಾರ್ಕೆಲ್ ರನ್ನು ಎದುರಿಸಿದ್ದೇನೆ ಎಂದರು.

ಆದರೆ ತಂಡದಲ್ಲಿ ಧೋನಿ ಇರುವವರೆಗೆ ನನಗೆ ಸ್ಥಾನ ದೊರೆಯುತ್ತಿರಲಿಲ್ಲ. ಹಾಗಾಗಿ ನನಗೆ ಅವಕಾಶ ಸಿಕ್ಕಾಗ ಉತ್ತಮ ಪ್ರದರ್ಶನ ನೀಡುತ್ತಿದ್ದೆ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next